Tuesday, March 13, 2018

ಸಂಚಿಕೆ ೧೩ *ವೇದವತಿ*

ಮಹಿಳಾ ದಿನಾಚರಣೆಗೆ ವಿಶಿಷ್ಟ ಲೇಖನ ಸರಣಿ

*ಸನಾತನ ಭಾರತದ ಸ್ತ್ರೀರತ್ನಗಳು*
ದ್ವಿತೀಯ ಅವತರಣಿಕೆ

ಸಂಚಿಕೆ ೧೩

*ವೇದವತಿ*

ಕುಶಧ್ವಜ ಹಾಗೂ ಮಾಲಾವತಿಯರ ಮಗಳು ವೇದವತಿ. ಅವಳು ಹುಟ್ಟಿದಾಕ್ಷಣ ಸೂತಿಕಾಗೃಹದಿಂದ ವೇದಮಂತ್ರಗಳು ಕೇಳಿ ಬಂದುದರಿಂದ ಅವಳಿಗೆ ವೇದವತಿಯೆಂದು ನಾಮಕರಣ ಮಾಡಲಾಯಿತು. ಸಂಸಾರಸಾಗರದಲ್ಲಿ ಈಜಲು ಇಷ್ಟವಿಲ್ಲದೆ ಸಣ್ಣ ವಯಸ್ಸಿನಲ್ಲಿಯೇ ತಪ್ಪಸ್ಸಿಗೆ ಹೊರಟು ನಿಂತಳು.

ಅರಣ್ಯದಲ್ಲಿ ಒಬ್ಬಂಟಿಯಾಗಿ ತಪಸ್ಸನ್ನು ಆಚರಿಸುತ್ತಿದ್ದ ಅವಳನ್ನು ಕಂಡ ರಾವಣ ತನ್ನ ಪುಷ್ಪಕವಿಮಾನದಿಂದ ಇಳಿದು ಅವಳ ಆಶ್ರಮಕ್ಕೆ ಬಂದ. ಅನಿರೀಕ್ಷಿತವಾಗಿ ಆಗಮಿಸಿದ ಅತಿಥಿಯನ್ನು ಯಥೋಚಿತವಾಗಿ ಸ್ವಾಗತಿಸಿದಳು ವೇದವತಿ. ಆದರೆ ಕಾಮುಕ ರಾವಣ ಅವಳ ಮೇಲೆ ಕೈ ಹಾಕಿದ. ಕೋಪೋದ್ರಿಕ್ತಳಾದ ವೇದವತಿಯು ತನ್ನ ತಪಃಪ್ರಭಾವದಿಂದ ಅವನನ್ನು ಸ್ತಂಭೀಭೂತನನ್ನಾಗಿ ಮಾಡಿದಳು. ಕೈ ಕಾಲು ನಾಲಿಗೆಗೆಗಳನ್ನು ಆಡಿಸಲು ಸಾಧ್ಯವಾಗದೆ ರಾವಣ ನಿಶ್ಚೇಷ್ಟಿತನಾದ. ಮನಸ್ಸಿನಲ್ಲೇ ಅವಳಿಗೆ ಶರಣಾದ. ’ಪರಸ್ತ್ರೀಯನ್ನು ಬಲಾತ್ಕಾರದಿಂದ ಕೂಡಿದರೆ ನೀನು ಸಾಯುವೆ. ಹೆಣ್ಣಿನ ದೆಸೆಯಿಂದಲೇ ನಿನಗೆ ಮರಣ ಬರಲಿ’ ಎಂದು ಶಪಿಸಿದಳು.(ಮುಂದೆ ರಾವಣ ಸೀತೆಯನ್ನು ಬಲಾತ್ಕರಿಸದೆ ಮನವೊಲಿಸಲು ಪ್ರಯತ್ನಿಸುವುದಕ್ಕೆ ಈ ಶಾಪವೇ ಕಾರಣ). ದುರುಳನ ಸ್ಪರ್ಶವಾದ ದೇಹವನ್ನು ಇಟ್ಟುಕೊಳ್ಳಲು ಮನಸ್ಸಾಗದೆ ಯೋಗಾಗ್ನಿಯಿಂದ ದಹಿಸಿಕೊಂಡಳು. ಲಕ್ಷ್ಮಿಯ ಅವತಾರವಾಗಿದ್ದ ವೇದವತಿಯೇ ಮುಂದೆ ಸೀತೆಯಾಗಿ ಬಂದು ರಾವಣನ ನಾಶಕ್ಕೆ ಕಾರಣಳಾದಳು.

✍🏻 *ಮಹಾಬಲ ಭಟ್, ಗೋವಾ*
ಸಂಪರ್ಕ: ೯೮೬೦೦೬೦೩೭೩

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...