Thursday, March 28, 2024

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्धषट्लक्षजनाः जातिमतपन्थवयांसि अतीत्य स्वातन्त्र्यप्राप्त्यर्थं प्राणार्पणम् अकुर्वन्। बालवयस्येव प्राणार्पणं कृतवत्सु नारायण धोनि अन्यतमः। 

’भारतं परित्यज्य गच्छत' इत्यान्दोलनस्य उच्छ्रायदिनानि तानि। त्रयोदशवर्षीयस्य तस्य मनसि स्वस्य देशस्य दास्यं शल्य इव वेदनां जनयति स्म। १९४५ तमवर्षस्य १५ दिनाङ्के तस्य हृदये किमपि भावजागरणम् । रात्रौ किमपि निश्चयं कृत्वा सुप्तः सः प्रभाते शीघ्रमुत्थाय श्वेतवस्त्रं धृतवान्। एकं वंशदण्डं स्वीकृत्य तदग्रे त्रिवर्णध्वजं संस्थाप्य मातरं प्रणतवान्। चकिता माता 'किमिदं वत्स! कुत्र प्रतिष्ठसे' इति अपृच्छत्। स तु उत्साहसम्पन्नेन ध्वनिना 'अम्ब! पार्श्वग्रामे दुर्गदबैल इत्यत्र स्वातन्त्र्यसङ्ग्रामः प्रचलति। अहमपि तत्र गत्वा ध्वजसञ्चलनं करोमि' इति अवदत्। सन्तुष्टापि भयकमपितस्वरेण माता उक्तवती यत् 'वत्स! त्वं तु बालः। सङ्ग्रामं ज्येष्ठाः प्रवर्तयन्ति। त्वं सुखेन क्रीडादिषु तत्परो भव' इति। 

तदाकर्ण्य सः वीरः बालः 'मातः! मातृभूमिः परसत्तायाम् अस्ति। कथं रमेत मे मनः क्रीडायाम्? नास्ति वयोमर्यादा देशसेवनकार्ये। अहं एतं ध्वजं उच्चैः कृत्वा सञ्चलामि।’ इत्युक्त्वा प्रस्थानं कृतवान् एव। 

बालस्य धीरता चलनस्य गाम्भीर्यञ्च ज्येष्ठानामपि स्पूर्तिदायके आस्ताम्। शोभायात्रायाः शोभाजनकं तमेव अग्रणीं कृत्वा सर्वे सञ्चलनम् आरब्धवन्तः। ”वन्दे मातरम्’ ”भारत माता कि जय’ इत्यादयः जयघोषाः गगने अनुरणिताः।  

आङ्ग्लानं सहनभित्तिः भग्ना। तेषां भुशुण्ड्यः गर्जनम् आरब्धवन्तः। जयघोषः हाहाकारत्वेन परिवर्तितः। एका गोलिका बालकस्य मृदुकायमपि प्राविशत्। जयघोषं कुर्वन्नेव सः धराशायी समभवत्। 

निस्तेजो भूत्वा पतितस्य तस्य मुखे कामपि इच्छां दृष्टवान् कश्चन आङ्ग्लाधिकारी तस्य निकटं गत्वा ’किमिच्छसि बाल?’ इति अपृच्छत्। ’स्वातन्त्र्यम् आवश्यकम्। ददाति किम्!” इति वेदनापूर्णध्वनिना परन्तु धीरभावेन इति वदन्नेव प्राणान् अत्यजत्। 

कर्णाटकप्रान्तस्य हुब्बल्लि इत्यत्र जन्म प्राप्तवान् नारायण महादेव धोनी नामकः आसीत् सः वीरबालः।

झलकारी

 ’आगच्छ वत्से! अहं त्वां किमपि विशिष्टं शिक्षयामि” इति प्रेम्णा आह्वयत् झलकार्याः पिता सदोवरसिंहः। बाल्ये एव मातुः मरणकारणात् पाककार्ये निरता बालिका झलकारी उत्साहेन कूर्दनं कुर्वती पितरम् अनुसृतवती। पिता तस्याः हस्ते खड्गमेकं दत्त्वा ’सम्यक् धर’ इति आदिशत्। पिता युद्धविद्यां शिक्षयति इति ज्ञात्वा तस्याः नेत्रे प्रफुल्लिते जाते। 

खड्गचालनम्, दण्डप्रहारः, शरप्रयोगः, अश्वारोहणम् इत्यादिषु युद्धविद्यासु शीघ्रमेव नैपुण्यं प्राप्तवती झलकारी। 

स्वस्मिन् द्वादशे वयसि एकदा काष्ठाहरणार्थं अरण्यं गतवती। तदा अकस्मात् कश्चन क्रूरः वृकः तस्याः उपरि आक्रमणम् अकरोत्। स्वहस्तस्थितेन परशुना एव तं वृकं सा अमारयत्। अपरेद्यवि पार्श्वगृहं समागतान् चोरान् दण्डप्रहारेण विषण्णान् अकरोत्। तस्याः शौर्यसमाचारः ग्रामान्तरेषु अपि प्रसृतः। 

झांसीराज्ञ्याः सैनिकेषु अन्यतमः पूरणः तस्याः वीरतया प्रभावितः तां परिणीतवान्। समानमनस्कौ तौ सुखजीवनं यापितवन्तौ। 

एकस्मिन् महाशिवरात्र्याः शुभदिने पूरणः झलकारीं राज्ञ्याः लक्ष्मीबाय्याः दर्शनार्थम् अनयत्। प्रथमदर्शने एव तस्याः वीरभङ्गी राज्ञीम् आकर्षत्। राज्ञ्याः रूपेण झलकार्याः रूपसाम्यम् आसीत्। अचिरादेव ते परस्परं स्नेहेन बद्धे। झलकारी नैकेषु युद्धप्रसङ्गेषु सैन्यस्य नेतृत्वम् ऊढ्वा शौर्येण अयुद्ध्यत। 

डालहौसी इत्यनेन आनीतं दत्तकपुत्रशासनम् झांसीराज्यस्य आक्रोशाय कारणम् अभवत्। राज्ञी शासनं विरुद्ध्य युद्धघोषणम् अकरोत्। सर्वेऽपि वीरसैनिकाः युद्धार्थं सज्जाः अभवन्। तदा एव प्रथमस्वातन्त्र्यसङ्ग्रामस्य रणघोषः अभवत्त्। ह्यूग् रोस् नामकः आङ्ग्लसेनापतिः झांसीम् आक्रमत्। कस्यचित् सैनिकस्य वञ्चनेन आङ्ग्लाः दुर्गे प्रवेशं प्राप्तवन्तः। 

राज्ञ्याः प्राणरक्षणार्थं झलकारी कञ्चन उपायम् अकरोत्। स्वयं राज्ञ्याः वेषं धृत्वा राज्ञीं प्रदेशान्तरं प्रेषितवती। सम्भ्रान्ताः आङ्ग्लाः तां गृहीतवन्तः। ते ताम् अभिज्ञाय तस्याः शौर्यं प्रशंसन्तः अवदन् - ’यदि भारतस्य एकप्रतिशतमहिलाः एतादृश्यः भवन्ति तर्हि अस्माभिः भारतं त्यक्त्वा गन्तव्यं भवति’ इति। 

तेषां बन्धनात् उपायेन पलायित्वा झलकारी अपरदिने पुनः युद्धम् आरब्धवती। तस्याः पतिः पूरणः वीरावेशेन युद्धं कृत्वा वीरगतिं प्राप्तवान्। वार्तां श्रुतवत्याः झलकार्याः वीरता इतोऽपि प्रज्ज्वला अभवत्। सा आङ्ग्लसैन्यस्य महतीं हानिं कृतवती। 

झांस्याः सैन्यं क्षीणम् अभवत्। अवशिष्टान् बहुसङ्ख्याकाः आङ्ग्लाः परिसमूह्य अहिंसन्। तेषां गोलिकाः झलकार्याः देहमपि छिद्रितम् अकुर्वन्। अन्यदेकं प्रफुल्लं सुवासितं कुसुमं भारतमातुः चरणयोः अपतत्।

मालती मेम्

 असमराज्यं ईशान्यभारतस्य रमणीयं राज्यम्। तत्र षट्शताधिकवर्षेभ्यः अहोमवंशस्य शासनं प्रचलति स्म। परन्तु आङ्ग्लाः बर्मायुद्धसन्दर्भे असमराज्यमपि हस्तवशम् अकुर्वन्।

असमराज्ये चायसस्यस्य कृषिः प्रधानतया भवति। तत्कार्यं कुर्वाणाः अनेके आदिवासिसमूहाः तत्र वर्तन्ते। तत्र काचित् चिन्तनशीला सुशिक्षिता युवतिरासीत्। तस्याः नाम मोङ्ग्री ओरङ्ग इत्यासीत्। सा सर्वैः सगौरवं ’मालती मेम्’ इति सम्बुद्ध्यते स्म।

 असमराज्ये चायकृषिणा सार्धं अपीम् इत्याख्यस्य मादकद्रव्यस्य सस्यमपि उत्पाद्यते स्म। तत्तु महार्घं, प्रभूतधनदायी च आसीत्। अतः अनेके आदिवासिनः तस्य कृषौ आसक्ताः आसन्।

 ये अपीम् कृषिकार्ये निरताः ते तस्य सेवनमपि कृत्वा व्यसनिनः समभवन्। अपरत्र आङ्ग्लाः तस्य वाणिज्यं लाभदायकं मत्वा सम्पूर्णं व्यवहारं स्वहस्तगतं कर्तुं प्रयत्नान् आरभन्त। सर्वैः सर्वकारीयवाणिज्यकेन्द्रद्वारा एव तस्य वाणिज्यं करणीयमिति शासनम् आगतम्। जनाः रुष्टाः अभवन्। आन्दोलनम् आरब्धम्।

 मालती जनानां नेतृत्वमवहत्। आदिवासिनां स्वातन्त्र्यहरणं विरुद्ध्य महत् आन्दोलनं प्रवृत्तम्। सुशिक्षिता मालती अपीमसेवनस्य दुष्परिणामं जानाति स्म। अतः स्वबान्धवान् आन्दोलनार्थं प्रेरयन्ती एव मादकद्रव्यसेवनं त्यक्तुं तान् उद्बोधितवती। ’प्रियबान्धवाः! यद्यपि अस्माकम् उत्पादनस्य वाणिज्यम् अस्माकम् अधिकारः इति सत्यमस्ति, तथापि अस्माभिः एतादृशमादकद्रव्यस्य उत्पादनमेव सावकाशतया त्यक्तव्यम्। यतः अस्माकं तनु-मन-धनशक्तिम् एतद्व्यसनम् अपहरति। अस्मान् दुर्बलान् करोति। अस्माकमेव हितदृष्ट्या एतस्य उत्पादनम् अस्माभिः त्यक्तव्यम्। तेन आङ्ग्लानां वाणिज्यमपि नश्यति’ इति बहुधा जनान् अजागरयत्।

 आन्दोलनं तीव्रगतिं प्राप्नोत्। मालती आङ्ग्लानां वाणिज्यकेन्द्रं गत्वा सङ्ग्रामं कर्तुं निश्चयं कृतवती। तस्याः सख्यः ताम् अवरुद्धवत्यः । परन्तु मालती ताः धिक्कृत्य वाणिज्यकेन्द्रं प्राविशत्।

 आन्दोलनस्य तीव्रस्वरूपं दृष्ट्वा आरक्षकाः गोलिकावर्षणमारब्धवन्तः। दुर्दैवात् मालती मेम् गोलिकाघातैः मरणम् अवाप्नोत्।

 आदिवासिनाम् अधिकाराय, तेषां जागरणाय च कटिबद्धा मालती स्वातन्त्र्याग्नौ स्वप्राणसमिधः समार्पयत्।

उत्तमव्यक्तित्वनिर्मात्री श्रीमद्भगवद्गीता

 व्यक्तित्वस्य व्यक्तेः च अविनाभावसम्बन्धः। उत्तमगुणोपेतः उत्तमः, निन्दनीयगुणोपेतः निन्दनीयश्च भवति समाजे। समाजे गौरवं, जीवने आनन्दञ्च प्राप्तुम् उत्तमव्यक्तित्वं सहकरोति।

अस्माकं सर्वेषां धर्मग्रन्थानाम् उद्देश्यमेव उत्तमव्यक्तिनिर्माणम्। तदनु उत्तमसमाजनिर्माणम्। उपनिषदां सारभूता श्रीमद्भगवद्गीता अपि एतत्कार्यं कर्तुं प्रवर्तिता अस्ति।

श्रीमद्भगवद्गीता श्रीकृष्णेन समूहाय न बोधिता । अपि तु अर्जुननामकाय एकस्मै पुरुषाय बोधिता। एकस्य नरस्य सम्भ्रान्तिं, अवकरसदृशान् दुर्गुणान् च उद्घाट्य तत्परिहारमार्गं दर्शयति इयं गीता। तत्स्थाने स्थिरा मतिः, सद्गुणाश्च कथम् आरोपणीयाः इत्यपि निर्दिशति।

ज्ञानमयप्रदीपस्य प्रज्वालकेन व्यासमहर्षिणा प्रथमे अध्याये यः अर्जुनः अस्माकं पुरतः उपस्थापितः सः अस्माकं व्यक्तित्वस्य प्रतिनिधिः एव अस्ति। तेन प्रदर्शितः सम्भ्रान्तचित्तता, शक्तिहीनता, निर्धारणे असामर्थ्यञ्च अस्माभिः अपि विभिन्नेषु सन्दर्भेषु अनुभूयते। तत्रापि उभावपि धर्मौ यदा ग्राह्यौ इति दृश्येते तदा सम्भ्रमः वर्धते। उत्तमव्यक्तित्वस्य असाधारणधर्मः विवेकशीलता। तदेव विलुप्य अस्मान् अन्धकारे पातयति ।

द्वितीये अध्याये गीताचार्यः गर्जति

क्लैब्यं मा स्म गमः पार्थ! नैतत्वय्युपपद्यते ।

क्षुद्रं हृदयदौर्बल्यं त्यक्त्वोत्तिष्ठ परन्तप! ॥ इति

हृदयदौर्बल्यमेव व्यक्तित्वस्य महान् कलङ्कः भवति। आत्मविश्वासः, धैर्यं, उत्साहः, एते सर्वे हृदयदौर्बल्येन नश्यन्ते। अतः उत्तमव्यक्तित्वनिर्माणाय हृदयदौर्बल्यस्य निवारणम् अनिवार्यम्।

व्यक्तित्वस्य नाशः कथं भवति इत्यपि भगवता चारुतया निरूपितम्।

ध्यायतो विषयान् पुंसः सङ्गस्तेषूपजायते ।

सङ्गात् सञ्जायते कामः कामात्क्रोधोऽभिजायते ।

क्रोधाद्भवति सम्मोहः सम्मोहात्स्मृतिविभ्रमः।

स्मृतिभ्रंशाद्बुद्धिनाशो बुद्धिनाशात्प्रणश्यति॥

क्रमेण विषयध्यानं, सङ्गः, कामः, क्रोधः, सम्मोहः, स्मृतिविभ्रमः, बुद्धिनाशः अन्ते च व्यक्तित्वनाशः भवति। अतः विषयसुखस्य दास्यमेव व्यक्तित्वनाशस्य मूलकारणं भवति।

गुणत्रयं वर्णयन् गीताचार्यः सात्त्विकगुणाश्रयणेन कथं शुद्धव्यक्तित्वनिर्माणं भवतीत्यपि निर्दिशति।

अपरत्र अस्माकम् आत्मा एव अस्माकं बन्धुः, रिपुश्च भवति इति सम्यगेव उक्तं वासुदेवेन ।

यदा जीवने सम्भ्रान्तिः भवति तदा उत्तमचारित्र्यवान् नरः न मुह्यति। तमेव कृष्णः ’धीरः’ इति पदेन निर्दिशति।

भगवद्गीतायाः उद्देश्यमेव उत्तमव्यक्तिनिर्माणम्। सम्भ्रमे सत्यपि यः सम्भ्रान्तः न भवति, आपदि योग्यं निर्णयं स्वीकरोति, सः एव आदर्शः नरः भवति। राष्ट्रनिर्माणे तादृशप्रजानाम् आवश्यकता वर्तते। अतः उत्तमव्यक्तिनिर्माणद्वारा सुराष्ट्रनिर्माणं भगवद्गीतायाः परमं लक्ष्यम्।

ನವೀನ ಭಟ್ಟರ ನವೀನ ಶೈಲಿಯ ಕೃತಿ ಕಥಾಗತ

ನವೀನ ಭಟ್ಟ ಗಂಗೋತ್ರಿಯವರ ನವೀನ ಪುಸ್ತಕ ಕಥಾಗತ ಇತ್ತೀಚೆಗೆ ಬಿಡುಗಡೆಯಾದ ಒಂದು ವಿಶಿಷ್ಟ ಪುಸ್ತಕ. ಹೊತ್ತಿಗೆಯ ಹೆಸರೇ ಹೇಳುವಂತೆ ಕಥೆಯಲ್ಲಿ ಅಡಕವಾದ ಇನ್ನೇನೋ ಇಲ್ಲಿ ಮಹತ್ತ್ವವನ್ನು ಹೊಂದಿದೆ. ವಿಷಯ ನಿರೂಪಣೆಗೆ ಸಹಾಯಕವಾಗಿ ಕಥೆ ಕೆಲಸ ಮಾಡುತ್ತದೆ.

ಲೇಖಕರು ನಮ್ಮ ರಾಷ್ಟ್ರದ ಇತಿಹಾಸದ ಕುರಿತಾಗಿ ಅನೇಕ ಗ್ರಂಥಗಳನ್ನು ಪರಿಶೀಲಿಸಿ, ಅವುಗಳ ಆಧಾರದ ಮೇಲೆ ಬರೆದ ವಿಶಿಷ್ಟ ಪುಸ್ತಕ ಇದು. ಇತಿಹಾಸ ಎಂದರೆ ಕೇವಲ ಅಂಕಿ-ಅಂಶಗಳಲ್ಲ. ನಮ್ಮ ದೇಶದ ಸಾಂಸ್ಕೃತಿಕ ಇತಿಹಾಸಕ್ಕೆ ಅದರದೇ ಮಹತ್ತ್ವವಿದೆ. ನಮ್ಮ ಕಲೆ, ಧರ್ಮ, ಸಂಸ್ಕೃತಿಗಳ ವಿಕಾಸ ಇತಿಹಾಸದ ಅವಿಭಾಜ್ಯ ಅಂಗ. ಆದರೆ ಇವೆಲ್ಲ ಇತಿಹಾಸದ ಬೋಧನೆಯ ಭಾಗವಾಗದೆ ಇರುವುದು ನಮ್ಮ ದೌರ್ಭಾಗ್ಯ. ಹಾಗಾಗಿ ಲೇಖಕರು ತಮ್ಮದೇ ಆದ ಶೈಲಿಯಲ್ಲಿ ನಮ್ಮ ರಾಷ್ಟ್ರದ ಇತಿಹಾಸದ ಕೆಲವು ಅಂಶಗಳನ್ನು ಇಲ್ಲಿ ನಿರೂಪಿಸಿದ್ದಾರೆ.

೧೪೨ ಪುಟಗಳಲ್ಲಿ ಎಂಟು ಅಧ್ಯಾಯಗಳಲ್ಲಿ ವಿಸ್ತರಿಸಿದೆ ಈ ಕಥನ. ’ನೆನೆವುದೆನ್ನ ಮನಂ’ ಎಂಬ ಮೊದಲ ಅಧ್ಯಾಯ ಕರ್ನಾಟಕದ ಹೆಮ್ಮೆಯ ಸಾಮ್ರಾಜ್ಯಸ್ಥಾಪಕರಾದ ಕದಂಬರಿಗೆ ಸಂಬಂಧಿಸಿದ್ದು. ’ಕಾಂಚೀ ಕಾಂತಿಮತೀ’ ಎಂಬ ಎರಡನೆಯ ಅಧ್ಯಾಯದಲ್ಲಿ ತಮಿಳು ಹಾಗೂ ಸಂಸ್ಕೃತದ ಮಧ್ಯೆ ಇರುವ ತರತಮವಾದವನ್ನು ಉಲ್ಲೇಖಿಸುತ್ತ ಕಥೆಯನ್ನು ಪಲ್ಲವರ ಶಿಲ್ಪಕಲಾಪೋಷಣೆಯತ್ತ ಹೊರಳಿಸಿದ್ದಾರೆ. ಬಹಳ ಆಸಕ್ತಿಯಿಂದ ಓದಿಸಿಕೊಂಡು ಹೋಗುವಂತೆ ಕಥೆಯನ್ನು ಹೆಣೆದಿದ್ದಾರೆ ಈ ಅಧ್ಯಾಯದಲ್ಲಿ.

ಮೂರನೆಯ ಅಧ್ಯಾಯ ’ಮಾಗಧಿಯ ಕಂಗಳಲ್ಲಿ’ ಎಂಬ ಹೆಸರಿನೊಂದಿಗೆ ನಲಂದಾ ವಿಶ್ವವಿದ್ಯಾಲಯದ ಏಳು ಬೀಳುಗಳ ಬಗ್ಗೆ, ಮಗಧಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲುತ್ತದೆ. ನನಗೆ ಅತ್ಯಂತ ಹೆಚ್ಚು ಖುಷಿ ಕೊಟ್ಟ ಅಧ್ಯಾಯ ಇದು. ನಾಲ್ಕನೆಯ ಅಧ್ಯಾಯದ ಹೆಸರು ’ಚಿನ್ನದ ಅಂಚಿನ ರೇಶಿಮೆ ದಾರಿ’. ಚೀನಾದಿಂದ ರೇಶಿಮೆ ಸಾಗಿ ಬಂದ ದಾರಿಯನ್ನು ವಿಶ್ಲೇಷಿಸುತ್ತ ಅದೊಂದು  ವಾಣಿಜ್ಯ ವ್ಯವಹಾರವಾಗಿರದೆ ಸಾಂಸ್ಕೃತಿಕ ಪಯಣವಾಗಿದೆ ಎಂದು ಸುಂದರವಾಗಿ ನಿರೂಪಿಸಿದ್ದಾರೆ. ಹ್ಯು-ಎನ್-ತ್ಸಾಂಗ್ ಎಂದು ಪ್ರಸಿದ್ಧನಾದ ಸುಅಂಗ್ಸಾಂಗ್ ನ ಪ್ರಯಾಣವನ್ನು ಸೊಗಸಾಗಿ ವರ್ಣಿಸಿದ್ದಾರೆ.

ಐದನೆಯ ಅಧ್ಯಾಯ ’ಕಣ್ಣು ಕೋರೈಸಿ ಪೊಣ್ಮಿದುದು ಅಗ್ನಿಚಿತ್ತ’ ಎಂಬ ಹೆಸರಿನೊಂದಿಗೆ ಹೊಯ್ಸಳರು ಚೆನ್ನಕೇಶವದೇವಾಲಯದ ನಿರ್ಮಾಣ ಮಾಡಿದ ರೋಚಕ ಕಥೆಯನ್ನು ತೆರೆದಿಡುತ್ತದೆ. ’ಆನೆ ಬಂತೊಂದಾನೆ’ ಎಂಬ ಆರನೆಯ ಅಧ್ಯಾಯ   ವಿಜಯನಗರ ಸಾಮ್ರಾಜ್ಯದ ವೈಭವ ಹಾಗೂ ಪತನಕ್ಕೆ ಸಂಬಂಧಿಸಿದ ಕಥೆಯನ್ನು ಒಳಗೊಂಡಿದೆ. ’ಭಾಗಮತಿಯೆಂಬ ಶಾಯರಿ’ ಎಂಬ ಶೀರ್ಷಿಕೆಯ ಏಳನೆಯ ಅಧ್ಯಾಯ ಹೈದರಾಬಾದ್ ನಗರದ ಇತಿಹಾಸಕ್ಕೆ ಸಂಬಂಧಿದ್ದು. ಎಂಟನೆಯ ಕೊನೆಯ ಅಧ್ಯಾಯದಲ್ಲಿ ’ಸಾವಿರದೊಂದನೆಯ ದೇವರು’ ಎಂಬ ಶೀರ್ಷಿಕೆಯಡಿ ಯಹೂದಿಗಳ ಜೀವಕ್ಕೆ ಬಂದ ಅಪಾಯ, ಗೋವಾದ ಇಂಕ್ವಿಸಿಶನ್, ಕಾಶ್ಮೀರದ ಜೆನೊಸೈಡ್ ಮುಂತಾದ ಅನೇಕ ವಿಷಯಗಳು ಕಥಾರೂಪದಲ್ಲಿ ನಿರೂಪಿತವಾಗಿವೆ. 

ಲೇಖಕ ನವೀನ ಭಟ್ಟರು ಕೊಯಮತ್ತೂರಿನ ಅಮೃತಾ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕರು. ತಮ್ಮ ಸಂಶೋಧನೆ ಹಾಗೂ ಸಂಶೋಧನೆಯ ಮಾರ್ಗದರ್ಶನದ ಅನುಭವಗಳನ್ನು ಈ ಕೃತಿಯಲ್ಲಿ ಎರಕ ಹೊಯ್ದಿದ್ದಾರೆ. ನಿರೂಪಣೆಯ ವಿಷಯಕ್ಕೆ ತಕ್ಕಂತಹ ಗಟ್ಟಿಯಾದ ಭಾಷೆ ಇವರದ್ದು. ಅನೇಕ ಕೃತಿಗಳ ರಚನೆಯಿಂದ ಮಾಗಿದ ಶೈಲಿ. ಪ್ರತಿಯೊಂದು ಅಧ್ಯಾಯವನ್ನು ಓದಿದಾಗಲೂ ಈ ವಿಷಯದಲ್ಲಿ ಇನ್ನಷ್ಟು ಬರೆಯಬಹುದಿತ್ತು ಎನಿಸುತ್ತದೆ. ಆದರೆ ಹೇಳಬೇಕಾದ ವಿಷಯವನ್ನು ಎಳೆದು ಜಗ್ಗಾಡದೆ ಸಂಕ್ಷಿಪ್ತವಾಗಿಯೇ ನಿರೂಪಿಸಿದ್ದಾರೆ. ಅಲ್ಲಲ್ಲಿ ಸಂಸ್ಕೃತಭೂಯಿಷ್ಠ ಪದಗಳು ಓದುಗರಿಗೆ ಕಾಠಿನ್ಯಭಾವವನ್ನು ಉಂಟುಮಾಡಿದರೆ ಆಶ್ಚರ್ಯವಿಲ್ಲ. ಬೆರಳೆಣಿಕೆಯಷ್ಟು ಕಡೆಗಳಲ್ಲಿ ಕಂಡು ಬರುವ ’ಉಪವಿಷ್ಟ ಭಂಗಿಯ ಮೂರ್ತಿ’ ಮುಂತಾದ ಪ್ರಯೋಗಗಳನ್ನು ನಿವಾರಿಸಬಹುದಿತ್ತು. ಒಟ್ಟಿನಲ್ಲಿ ಉತ್ತಮ ಗ್ರಂಥವೊಂದನ್ನು ಓದಿದ ಭಾವದೊಂದಿಗೆ ಮುಗಿಸಬಹುದಾದ ಕೃತಿ. ನಮ್ಮ ಮನೆಯ ಗ್ರಂಥಾಲಯಕ್ಕೂ ಶೋಭೆಯನ್ನು ಒದಗಿಸುವ ಉತ್ತಮ ಹೊತ್ತಿಗೆ.

ಕುಮಟಾದ ಸ್ವಸ್ತಿ ಪ್ರಕಾಶನ ಈ ಕೃತಿಯನ್ನು ಹೊರತಂದಿದೆ. ಪ್ರಕಾಶನದ ದಶಮಾನೋತ್ಸವ ಪ್ರಕಟಣೆ ಇದು. ಸುಂದರ ಮುಖಚಿತ್ರ, ತಪ್ಪಿಲ್ಲದ ಮುದ್ರಣ ಕೃತಿಯ ಮೌಲಿಕತೆಯನ್ನು ಹೆಚ್ಚಿಸಿದೆ.   ಬೆಲೆ ೧೫೦ ರೂಪಾಯಿಗಳು. ಇಂತಹ ಕೃತಿಗಳನ್ನು ಓದಿ ಮಥಿಸಿ, ಚರ್ಚಿಸಬೇಕಾದ್ದು ಇಂದಿನ ಆವಶ್ಯಕತೆ. ಆಸಕ್ತರು 9483617879  ಈ ಸಂಖ್ಯೆಯನ್ನು ಸಂಪರ್ಕಿಸಿ ಪುಸ್ತಕವನ್ನು ತರಿಸಿಕೊಳ್ಳಬಹುದು.

ಅಪೂರ್ಣವಲ್ಲ... ಪೂರ್ಣತೆಯೆಡೆಗೆ ಸಾಗುವ ದಾರಿ

 ಸುಧಾ ಎಂ. ಅವರ ಚೊಚ್ಚಲ ಕಥಾಸಂಕಲನ ಅಪೂರ್ಣವಲ್ಲ... ಒಂದು ಪೂರ್ಣಪ್ರಮಾಣದ ತೃಪ್ತಿಯನ್ನು ನೀಡುವ ಉತ್ತಮ ಕೃತಿ. ಹಳ್ಳಿಯ ಬದುಕಿನ ಸೊಗಡನ್ನೂ, ಹಳ್ಳಿಗರ ಹೃದಯದ ಭಾವನೆಗಳನ್ನೂ ಹಿಡಿದಿಡುವಲ್ಲಿ ಲೇಖಕಿಯ ಬರಹಗಳು ಸಶಕ್ತವಾಗಿವೆ.ಕಾರ್ತಿಕಾದಿತ್ಯ ಬೆಳ್ಗೋಡು ಅವರು ಬೆನ್ನುಡಿಯಲ್ಲಿ ಹೇಳಿದಂತೆ ’ಪ್ರತೀ ಕಥೆಯ ಪಾತ್ರಗಳನ್ನು ಅವರು ಯಾಂತ್ರಿಕವಾದ ನೆಲೆಗಟ್ಟಿನಲ್ಲಿ ಕಟ್ಟದೆ, ಭಾವನೆಗಳೊಂದಿಗೆ ಒಂದು ನಮೂನೆಯ ಪ್ರೀತಿಯೊಂದಿಗೆ ಪರಸ್ಪರ ಬೆಸೆಯುತ್ತಾರೆ.’ ಅವರ ಕಥೆಗಳನ್ನು ಒಂದೊಂದಾಗಿ ಬಿಚ್ಚುತ್ತಾ ಹೋಗೋಣ.

ಕೃತಿಯ ಹೆಸರನ್ನೇ ಹೊಂದಿರುವ ಮೊದಲ ಕಥೆ ಒಬ್ಬ ಪ್ರೇಮಿಯದ್ದು. ಅವನ ಪ್ರೇಯಸಿ ಇನ್ನೊಂದು ಮದುವೆಯಾಗಿರುವುದು ಗೊತ್ತಿದ್ದರೂ ಅವನನ್ನು ಭಗ್ನಪ್ರೇಮಿ ಎಂದು ಕರೆಯಲಾಗದು. ಯಾಕೆಂದರೆ ಅವನು ತನ್ನ ಪ್ರೇಮನಿವೇದನೆಯನ್ನೇ ಮಾಡಿಕೊಂಡಿರಲಿಲ್ಲ. ಅಷ್ಟೇ ಅಲ್ಲ ಆ ಪ್ರೇಮ ಇನ್ನೂ ಅವನ ಹೃದಯದಲ್ಲಿ ಸತ್ತಿಲ್ಲ. ಅದರ ಜೀವಂತಿಕೆಯೇ ಅವನನ್ನು ಅವಿವಾಹಿತನನ್ನಾಗಿಯೇ ಇರಿಸಿದೆ. ಒಂದಿನ ಅಚಾನಕ್ಕಾಗಿ ಅವಳೇ ಸಿಕ್ಕಾಗ ಅವನ ಹೃದಯ ಅರಳಿದ ಪರಿಯನ್ನು ಲೇಖಕಿ ಸೊಗಸಾಗಿ ಚಿತ್ರಿಸಿದ್ದಾರೆ. ಹೃದಯದ ಅದೆಷ್ಟೋ ಭಾವನೆಗಳು ಹೀಗೆಯೇ ವ್ಯಕ್ತವಾಗದೆ ಹುದುಗಿಹೋಗಿರುತ್ತವೆ. ಸ್ನೇಹದ ಮಧ್ಯೆ ಪ್ರೇಮದ ಮಾತು ಬಂದರೆ ಅದು ಕೆಟ್ಟ ಭಾವನೆಯೆಂದು ಪರಿಗಣಿತವಾಗುತ್ತದೆ ಎಂಬ ಅಳುಕು ಆ ಸಂದರ್ಭದಲ್ಲಿರುತ್ತದೆ.

ಎರಡನೆಯ ಕಥೆ ಹಾಳಿ ಹಳ್ಳಿಯ ಬದುಕಿನ ಕರುಣಾಮಯ ಬದುಕನ್ನು ತೆರೆದಿಡುತ್ತದೆ. ನೆರೆಬಂದಾಗ ಹೊಳೆದಾಟುವುದು,  ಗದ್ದೆಯ ಹಾಳಿಯ ಮೇಲೆ ನಡೆದುಹೋಗುವುದು ಮುಂತಾದ ಹಳ್ಳಿಯ ಚಿತ್ರಗಳನ್ನು ಈ ಕಥೆ ಕಟ್ಟಿಕೊಡುತ್ತದೆ.

ಬಿದ್ದಾಗ ಬರದವರು ಎಂಬ ಮೂರನೆಯ ಕಥೆ ಒಂದು ನೀಳ್ಗತೆ. ದಿನಕರನೆಂಬ ಇಂಜಿನಿಯರಿಂಗ್ ಓದಿದ ವ್ಯಕ್ತಿ, ವಿದೇಶದಲ್ಲಿ ಕೆಲಸ ಮಾಡುತ್ತ, ಹಳ್ಳಿಯ ಮೇಲೆ ಪ್ರೀತಿಯನ್ನು ಬೆಳೆಸಿಕೊಳ್ಳುವ ಕಥಾನಕ. ಒಂಟಿ ಮನೆಯ ಬದುಕು, ಅಪ್ಪನ ಮೇಲಿನ ಅಪಾರ ಪ್ರೀತಿ ಇವು ಎಳೆ ಎಳೆಯಾಗಿ ಹೆಣೆಯಲ್ಪಟ್ಟಿವೆ. ಜೊತೆಗೆ, ಕಷ್ಟದಲ್ಲಿದ್ದಾಗ ಬರದವರು, ಮಗ ಓದಿ ವಿದೇಶದಲ್ಲಿದ್ದಾನೆ ಎಂದಾಕ್ಷಣ ಜಾತಕ ಹಿಡಿದು ಬರುವ ಸೊಗಲಾಡಿತನವನ್ನೂ ಲೇಖಕಿ ಬಿಚ್ಚಿಟ್ಟಿದ್ದಾರೆ.

ನಾಲ್ಕನೆಯ ಕಥೆ ಹಿಸೆ, ಗಂಡುಮಕ್ಕಳು ದೊಡ್ಡವರಾದಾಗ ಅಪ್ಪನನ್ನೇ ಹಿಸೆ ಕೇಳುವ ಮಟ್ಟಕ್ಕೆ ಇಳಿಯುತ್ತಾರೆ ಎಂಬ ಕಹಿ ಸತ್ಯವನ್ನು ನಮ್ಮ ಮುಂದಿಡುತ್ತದೆ. ಗಂಡುಮಕ್ಕಳೆಂದು ಬೀಗುವುದು ಮುಖ್ಯವಲ್ಲ, ಅವರಿಗೆ ಬೇಕು ಬೇಕಾದ್ದನ್ನೆಲ್ಲ ಒದಗಿಸುತ್ತ ಜೀವನದ ಕಷ್ಟವೆಂದರೇನು ಎಂಬುದೇ ತಿಳಿಯದಂತೆ ಬೆಳೆಸುವುದು ಸರಿಯಲ್ಲ ಎಂಬ ಪಾಠವನ್ನು ಈ ಕಥೆ ತಿಳಿಸಿಕೊಡುತ್ತದೆ.

ತಲೆಮಾರು ಎಂಬ ಕಥೆ ಹಳ್ಳಿಯ ಮನೆಯೊಂದರ ಚಿತ್ರಣವನ್ನು ನೀಡುತ್ತದೆ. ತುಂಬಿ ತುಳುಕುತ್ತಿದ್ದ ಮನೆಯೊಂದು ತಲೆಮಾರುಗಳ ನಂತರ ಜೇಡರಬಲೆಯ ಬೀಡಾಗಿ ಹೋಗುವುದಕ್ಕೆ ಕಾರಣ ಏನು? ಪೇಟೆಯ ಥಳುಕು ಬಳುಕಿನ ಜೀವನದ ಆಕರ್ಷಣೆಯೊ, ಹಳ್ಳಿಯ ಜೀವನದ ಬಗೆಗಿನ ತಾತ್ಸಾರವೊ ಎಂಬೆಲ್ಲ ವಿಷಯಗಳ ಚರ್ಚೆ ಈ ಕಥೆಯಲ್ಲಿದೆ.

ಫಿರ್ಖಾನ್-ಸೋಮಿ ಎಂಬ ಬುಡಕಟ್ಟು ಜನಾಜಂಗದ ಜೋಡಿಯ ಸುತ್ತ ಹೆಣೆದ ಕಥೆ ಬಲಿ. ಕಾಡಿನಲ್ಲಿ ವಾಸಿಸುತ್ತ, ಕಾಡನ್ನು ಪ್ರೀತಿಸುತ್ತ, ಕಾಡನ್ನೇ ಜೀವನವನ್ನಾಗಿಸಿಕೊಂಡ ಈ ಜೋಡಿಯ ಮೂಲಕ ಕಾಡಿನ ಬುಡಕಟ್ಟು ಜನಾಂಗದ ಜೀವನಚಿತ್ರಣವನ್ನು ಲೇಖಕಿ ನೀಡಿದ್ದಾರೆ. ಮಧ್ಯೆ ಮಧ್ಯೆ ಕೊಂಕಣಿ ಭಾಷೆಯ ಸಂಭಾಷಣೆಯನ್ನೂ ಅಳವಡಿಸಿ ಚಿತ್ರಣವನ್ನು ನೈಜವಾಗಿಸಿದ್ದಾರೆ. ಅಂಥವರ ಜೀವನದಲ್ಲಿ ಹೊರಗಿನಿಂದ ಪ್ರವೇಶಿಸುವ ವಿಶಾಲ್ ಎಂಬ ಸ್ವಾರ್ಥಿ, ತನ್ನ ಸ್ಮಗ್ಲಿಂಗ್ ವ್ಯವಹಾರಕ್ಕೆ ವನವಾಸಿಗಳನ್ನು ಬಳಸಿಕೊಳ್ಳುತ್ತಾ, ಅವರಿಗೂ ಕಳ್ಳದಂಧೆಯ ರುಚಿಹತ್ತಿಸಿ ಕೆಡಿಸುತ್ತಾನೆ. ಮತಾಂತರದ ಪ್ರಯತ್ನದ ಬಗ್ಗೆ ಅದರ ವಿರುದ್ಧದ ಹೋರಾಟದ ಬಗ್ಗೆಯೂ ಇಲ್ಲಿ ಉಲ್ಲೇಖ ಇದೆ. ಕೊನೆಗೆ ವಿಶಾಲನ ಸ್ವಾರ್ಥಕ್ಕೆ ಸೋಮಿಯ ಜೀವ ಬಲಿಯಾಗಿ ಹೋಗುತ್ತದೆ.

ಕಣಿ ಎನ್ನುವ ಕಥೆ ಜೀವನದಲ್ಲಿ ನೊಂದ ಹೆಣ್ಣುಮಗಳೊಬ್ಬಳ ಮನೋಗತವನ್ನು ತೆರೆದಿಡುತ್ತದೆ. ಜೋಗತಿಯೊಬ್ಬಳ ಕಣಿಯ ಮಾತಿನ ಮೋಡಿಗೊಳಗಾಗುತ್ತ, ತನ್ನೆಲ್ಲ ನೋವುಗಳನ್ನು ಕಥಾನಾಯಕಿ ತೆರೆದಿಡುತ್ತಾಳೆ. ಕುಟುಂಬದಲ್ಲಿ ಆರ್ಥಿಕ ಕಷ್ಟ ಎದುರಾದಾಗ ಯಾವ ರೀತಿಯಲ್ಲಿ ನಿಭಾಯಿಸಬೇಕು, ಅದು ಜೀವನವನ್ನು ಯಾವರೀತಿ ಜರ್ಜರಿತವನ್ನಾಗಿ ಮಾಡಿಬಿಡುತ್ತದೆ ಎಂಬುದನ್ನು ಕಥೆ ಚಿತ್ರಿಸಿಕೊಡುತ್ತದೆ.

ಕೊನೆಗೌಡ ಮತ್ತು ಪ್ರೀತಿ ಎಂಬ ಕಥೆ ವಿಶಿಷ್ಟವಾದದ್ದು. ಪ್ರೀತಿ ಎನ್ನುವುದು ಕೇವಲ ಮೇಲ್ವರ್ಗದ ಸೊತ್ತಲ್ಲ, ಪ್ರೀತಿಯ ನಿಜವಾದ ರೂಪ ಕಾಣಿಸುವುದು ಸಂಸಾರ ಆರಂಭವಾದ ಮೇಲೆ ಎಂಬುದನ್ನು ಸುಂದರವಾಗಿ ತಿಳಿಸಿಕೊಡುವ ಕಥೆ. ಅನಾಥನಾಗಿದ್ದ ಕಥಾನಾಯಕ ಹೆಂಡತಿಯನ್ನೇ ಸರ್ವಸ್ವವೆಂದು ಬಗೆದು ಅವಳಿಗೆ ಪ್ರೀತಿಯನ್ನು ಧಾರೆಯೆರೆಯುವ ಪರಿ ಮನೋಜ್ಞವಾಗಿ ಚಿತ್ರಿತವಾಗಿದೆ. ವೃದ್ಧಾಪ್ಯದಲ್ಲೂ ಪ್ರೀತಿ ಬಾಡದೆ ಮಾಗುತ್ತದೆ ಎಂಬುದನ್ನು ಲೇಖಕಿ ಸಮರ್ಥವಾಗಿ ನಿರೂಪಿಸಿದ್ದಾರೆ.

ಕಾಲವು ಬರುವುದು ಒಂದು ದಿನ ಎಂಬ ಕೊನೆಯ ಕಥೆ ಸಾಮಾಜಿಕ ಸುಧಾರಣೆಯನ್ನು ಮಾಡಹೋಗಿ ಬಹಿಷ್ಕಾರಕ್ಕೆ ಒಳಗಾದವನ ಕಥೆ. ವಿಧವಾ ವಿವಾಹದಂತಹ ಸಾಮಾಜಿಕ ಸುಧಾರಣೆಗಳ ಬಗ್ಗೆ ಭಾಷಣ ಬಿಗಿಯುವ ಮಠ ಮಾನ್ಯಗಳೇ ನಿಜವಾಗಿ ಅಂಥವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವವರನ್ನು ಬಹಿಷ್ಕರಿಸುತ್ತದೆ ಎಂಬ ವಿಡಂಬನೆಯನ್ನು ಈ ಕಥೆಯಲ್ಲಿ ಹೊರಗೆಡಹಿದ್ದಾರೆ.

ಹೀಗೆ ಒಂಭತ್ತು ಕಥೆಗಳ ಈ ಸಂಕಲನದ ತುಂಬೆಲ್ಲ ಹಳ್ಳಿಯ ಜೀವನದ ಏಳು-ಬೀಳುಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಹಳ್ಳಿಯ ಜೀವನದ ಮೇಲೆ ಲೇಖಕಿಗಿರುವ ಪ್ರೀತಿ, ಇಲ್ಲಿಯ ಸಿರಿಯನ್ನೆಲ್ಲ ತೊರೆದು ತಂದೆ ತಾಯಿಯರನ್ನು ಅನಾಥರನ್ನಾಗಿ ಮಾಡಿ ಹೊಗುವ ಆಧುನಿಕ ಪೀಳಿಗೆಯ  ಮೇಲಿರುವ ತಾತ್ಸಾರ ಸ್ಪಷ್ಟವಾಗಿ ವ್ಯಕ್ತವಾಗಿವೆ. ಇಲ್ಲಿನ ಕಥೆಗಳು ಸರಳವಾಗಿ ಹೇಳಲ್ಪಟ್ಟಿವೆ. ಭಾಷೆಯಲ್ಲಿಯೂ ಗ್ರಾಂಥಿಕತೆ ಇಲ್ಲ. ಹಳ್ಳಿಯ ಆಡುಭಾಷೆಯನ್ನೇ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಇಲ್ಲಿ ಕಥಾಹಂದರಕ್ಕಿಂತ ಪಾತ್ರಗಳ ಮೂಲಕ ಲೇಖಕಿ ಹೇಳಿಸುವ ವಿಚಾರಗಳು, ಚಿಂತನೆಗಳು ಮುಖ್ಯವೆನಿಸುತ್ತವೆ. ಅವೇ ಇಲ್ಲಿನ ಕಥೆಗಳ ಜೀವ. ಒಟ್ಟಿನಲ್ಲಿ ಲೇಖಕಿ ಒಂದು ಚೆಂದದ ಕಥಾಸಂಕಲನವನ್ನು ಇತ್ತಿದ್ದಾರೆ. ಚೊಚ್ಚಲ ಕೃತಿಯಲ್ಲೇ ಭರವಸೆಯನ್ನು ಮೂಡಿಸಿದ್ದಾರೆ.

ಸ್ವಸ್ತಿ ಪ್ರಕಾಶನ ಸುಂದರ ಮುಖಪುಟ ಹಾಗೂ ಶುದ್ಧ ಮುದ್ರಣದ ಮೂಲಕ ಚೆಂದವಾಗಿ ಈ ಕೃತಿಯನ್ನು ನೀಡಿದೆ. ೧೧೨ ಪುಟಗಳ ಪುಸ್ತಕದ ಬೆಲೆ ೧೨೦/-. ಸಂಪರ್ಕ: ೯೪೮೩೬೧೭೮೭೯/೯೯೪೫೫೪೬೬೧೫.

ಸಂಸ್ಕೃತದ ಹಿರಿಮೆ

 ಕೆ.ಎಲ್.ಇ. ಧ್ವನಿಯ ಶ್ರೊತೃಗಳಿಗೆಲ್ಲ ನಮಸ್ಕಾರ. ರಕ್ಷಾಬಂಧನ ಹಾಗೂ ಸಂಸ್ಕೃತದಿನದ ಶುಭಾಶಯಗಳು.

ಸಂಸ್ಕೃತ ಎಂದಾಕ್ಷಣವೇ ನಮಗೆಲ್ಲ ನೆನಪಾಗುವುದು ಪ್ರಾಚೀನಭಾರತ. ತಕ್ಷಶಿಲೆ, ನಲಂದಾ ಮೊದಲಾದ ವಿಶ್ವವಿಖ್ಯಾತವಿದ್ಯಾಕೇಂದ್ರಗಳ ಜಗದ್ಗುರು ಭಾರತ. ಹೌದು. ಹಿಂದೊಮ್ಮೆ ಭಾರತೀಯ ಜ್ಞಾನಪರಂಪರೆ ವಿಶ್ವಕ್ಕೇ ಮಾದರಿಯಾಗಿತ್ತು. ಜ್ಞಾನಪಿಪಾಸುಗಳೆಲ್ಲ ಭಾರತದತ್ತ ಮುಖ ಮಾಡುತ್ತಿದ್ದರು. ಇಂದಿಗೂ ಭಾರತಕ್ಕೆ ಆ ಸಾಮರ್ಥ್ಯವಿದೆ. ಅದರ ಹಿಂದಿನ ವಾಹಕ ಶಕ್ತಿ ಇದೇ ಸಂಸ್ಕೃತವೆಂಬ ಭಾಷೆ.

ಭಾರತೀಯರಿಗೆ ಭಾಷೆಯೆಂಬುದು ಕೇವಲ ಸಂವಹನ ಮಾಧ್ಯಮವಲ್ಲ. ಅದು ಸಂಸ್ಕೃತಿಯ ವಾಹಿನೀ. ನಮ್ಮತನದ ಸಂಕೇತವೂ ಹೌದು. ಹಾಗಾಗಿ ಭಾಷೆಯ ರಕ್ಷಣೆ ಎಂದರೆ ಸಂಸ್ಕೃತಿಯ ರಕ್ಷಣೆ. ತನ್ಮೂಲಕ ಅಭಿಜಾತ ಸಮಾಜದ ರಕ್ಷಣೆ. ಇಂದಿಗೂ ಸಂಸ್ಕೃತಭಾಷೆ ಭಾರತೀಯತ್ವದ ಸಂಕೇತವಾಗಿ ನಿಲ್ಲುವುದು ಆ ಕಾರಣಕ್ಕೆ.

ಸಂಸ್ಕೃತದ ಬಗ್ಗೆ ಸಂಸ್ಕೃತದಲ್ಲಿಯೇ ಒಂದು ಮಾತಿದೆ: ಭಾಷಾಸು ಮುಖ್ಯಾ ಮಧುರಾ ದಿವ್ಯಾ ಗೀರ್ವಾಣಭಾರತೀ. ಭಾಷೆಗಳಲ್ಲಿ ಮುಖ್ಯವೂ, ಮಧುರವೂ, ದಿವ್ಯವೂ ಆದ ಭಾಷೆ ಸಂಸ್ಕೃತಭಾಷೆ. ಈ ಮಾತಿನ ಹಿಂದಿರುವ ವಿಚಾರಗಳನ್ನು ತಿಳಿಯುತ್ತ ಹೋದರೆ ಸಂಸ್ಕೃತಭಾಷೆಯ ವಿಭಿನ್ನಪದರುಗಳು ಗೋಚರವಾಗುತ್ತ ಹೋಗುತ್ತವೆ.

ಸಂಸ್ಕೃತಭಾಷೆ ಭಾಷೆಗಳಲ್ಲಿ ಮುಖ್ಯವಾಗಿ ಗೋಚರವಾಗುವುದಕ್ಕೆ ಮುಖ್ಯಕಾರಣ ಅದರ ವೈಜ್ಞಾನಿಕ ರಚನೆ. ವರ್ಣಮಾಲೆಯನ್ನೇ ತೆಗೆದುಕೊಂಡರೆ ಅಲ್ಲಿರುವ ಹೃಸ್ವ-ದೀರ್ಘ-ಪ್ಲುತ ಸ್ವರಗಳು, ಅನುಸ್ವಾರ, ವಿಸರ್ಗ, ವರ್ಗೀಯ-ಅವರ್ಗೀಯ, ಕರ್ಕಶ-ಮೃದು-ಅನುನಾಸಿಕ, ಅಲ್ಪಪ್ರಾಣ-ಮಹಾಪ್ರಾಣ ವ್ಯಂಜನಗಳು ಇವನ್ನೆಲ್ಲ ಗಮನಿಸಿದರೆ ಭಾಷೆ ಎಂತಹ ವೈಜ್ಞಾನಿಕ ತಳಹದಿಯ ಮೇಲೆ ನಿಂತಿದೆ ಎಂಬ ಅರಿವಾಗುತ್ತದೆ ಅಷ್ಟೇ ಅಲ್ಲ ಇನ್ನಿತರ ಎಷ್ಟೋ ಭಾಷೆಗಳ ಸಂರಚನೆಗೆ ಆಧಾರಭೂತವಾಗಿ ನಿಂತಿದೆ ಎಂದು ತಿಳಿಯುತ್ತದೆ. ಸಂಸ್ಕೃತಶಬ್ದಗಳ ಉಚ್ಚಾರಣೆಯಿಂದ ಪ್ರಾಣಾಯಾಮ ಮಾಡಿದಂತಾಗುವುದರಿಂದ ಆರೋಗ್ಯವರ್ಧನೆಯಾಗುತ್ತದೆ ಎಂಬುದೂ ಪ್ರಾಜ್ಞರ ಅಂಬೋಣ. ಉಚ್ಚಾರಣಶಾಸ್ತ್ರದ ವಿಷಯದಲ್ಲಿ ಪಾಣಿನೀಯ ಶಿಕ್ಷಾ ಇತ್ಯಾದಿ ಗ್ರಂಥಗಳ ಕೊಡುಗೆ ಅಪಾರ. ಜಗತ್ತಿನ ಅನೇಕ ಭಾಷೆಗಳಿಗೆ ಸಂಸ್ಕೃತ ಫೊನೆಟಿಕ್ಸ್ ಮಾರ್ಗದರ್ಶಕವಾಗಿ ನಿಂತಿದೆ.

ಸಂಸ್ಕೃತಭಾಷೆ ಮುಖ್ಯ ಎನಿಸಲಿಕ್ಕೆ ಇನ್ನೊಂದು ಕಾರಣ ಅದರ ಅಗಾಧ ಸಾಹಿತ್ಯರಾಶಿ. ವೇದಗಳಿಂದ ಹಿಡಿದು ಇಂದಿನ ಗೇಯ ಗೀತೆಗಳವರೆಗೆ ಊಹಿಸಲಾಗದಷ್ಟು ಸಾಹಿತ್ಯವನ್ನು ತನ್ನ ಗರ್ಭದಲ್ಲಿ ಅಡಗಿಸಿಕೊಂಡಿದೆ. ಜಗತ್ತಿನ ಅನೇಕ ಭಾಷೆಗಳಲ್ಲಿ ರಚಿತವಾದ ಬಹಳಷ್ಟು ಸಾಹಿತ್ಯಗಳು ಸಂಸ್ಕೃತದ ಪ್ರಾಚೀನಗ್ರಂಥಗಳ ಆಧಾರದಲ್ಲಿ ರಚಿತವಾದವು. ಕನ್ನಡದಲ್ಲಿಯೂ ಪಂಪ, ರನ್ನ, ಕುಮಾರವ್ಯಾಸ, ಕುವೆಂಪು ಇತ್ಯಾದಿ ಮಹಾಕವಿಗಳ ಕಾವ್ಯಗಳೂ ಮೂಲ ಸಂಸ್ಕೃತಕಾವ್ಯಗಳ ನೆರಳಲ್ಲೇ ರಚಿತವಾದವು ಎಂಬುದನ್ನು ಗಮನಿಸಬೇಕು. ಎಷ್ಟೋ ಸಹಸ್ರವರ್ಷಗಳು ಕಳೆದರೂ ಇಂದಿಗೂ ಸಂಸ್ಕೃತಸಾಹಿತ್ಯ ಇತರರ ಸಾಹಿತ್ಯರಚನೆಗೆ ಸಾಮಗ್ರಿಗಳನ್ನು ಒದಗಿಸುತ್ತಲೇ ಇದೆ. ಸಂಸ್ಕೃತದಲ್ಲಿ ಯಾವ ಪ್ರಕಾರದ ಸಾಹಿತ್ಯವೂ ಇಲ್ಲವೆಂಬಂತ್ತಿಲ್ಲ. ಋಷಿಗಳಿಂದ ದರ್ಶಿಸಲ್ಪಟ್ಟ ವೇದಗಳು, ಅದ್ಭುತಪುರಾಣಗಳು, ರಾಮಾಯಣ ಮಹಾಭಾರತದಂತಹ ಆರ್ಷಕಾವ್ಯಗಳು, ಕಾಳಿದಾಸ, ಬಾಣಭಟ್ಟರಂತಹ ಕವಿಗಳ ಅನುಪಮ ಕಾವ್ಯ-ನಾಟಕಗಳು, ಅರ್ಥಶಾಸ್ತ್ರ, ಗಣಿತ, ವಿಜ್ಞಾನ, ಆಧುನಿಕ ಕಾದಂಬರಿಗಳು, ಗೇಯಗೀತೆಗಳು, ಶಿಶುಸಾಹಿತ್ಯ ಹೀಗೆ ವೈವಿಧ್ಯಮಯವಾದ ಅಪರಿಮಿತ ಸಾಹಿತ್ಯವನ್ನು ಸಂಸ್ಕೃತಭಾಷೆಯಲ್ಲಿ ಕಾಣಬಹುದು.

ಇಂದು ಅನೇಕ ಭಾಷೆಗಳಲ್ಲಿ ಅದರಲ್ಲೂ ಭಾರತೀಯ ಭಾಷೆಗಳಲ್ಲಿ ಸಂಸ್ಕೃತಶಬ್ದಗಳು ಹೇರಳವಾಗಿ ಬಳಸಲ್ಪಡುತ್ತವೆ. ಕನ್ನಡಭಾಷೆಯಲ್ಲಿಯೂ ಸಾಕಷ್ಟು ಸಂಸ್ಕೃತಶಬ್ದಗಳು ಹಾಸುಹೊಕ್ಕಾಗಿವೆ. ಅನೇಕ ಶಬ್ದಗಳು ಸಂಸ್ಕೃತದಿಂದ ನಿಷ್ಪನ್ನವಾಗಿ ತದ್ಭವ ಎನಿಸಿಕೊಳ್ಳುತ್ತವೆ. ಸಂಸ್ಕೃತದ ಅಗಾಧ ಶಬ್ದಸಂಪತ್ತು ಇತರ ಭಾಷೆಗಳನ್ನೂ ಶ್ರೀಮಂತಗೊಳಿಸುತ್ತದೆ. ಅಷ್ಟೇ ಅಲ್ಲ ಉಪಸರ್ಗ-ಪ್ರತ್ಯಯಗಳ ಜೋಡಣೆಯಿಂದ ಹೊಸಶಬ್ದಗಳನ್ನು ಸೃಷ್ಟಿಸುವ ಶಕ್ತಿಯೂ ಸಂಸ್ಕೃತಕ್ಕೆ ಅಪಾರವಾಗಿದೆ.

ಸಂಸ್ಕೃತಭಾಷೆ ಜನಪ್ರಿಯವಾಗಲು ಅದರ ಮಾಧುರ್ಯ ಒಂದು ಮುಖ್ಯ ಕಾರಣ. ಕಾಳಿದಾಸನ ಅಲಂಕಾರವೈದುಷ್ಯ, ಭಾರವಿಯ ಅರ್ಥಗೌರವ, ದಂಡಿಯ ಪದಲಾಲಿತ್ಯ, ಗೀತಗೋವಿಂದದ ಗೇಯತೆ ಹೀಗೆ ಸಂಸ್ಕೃತಕಾವ್ಯಗಳ ಅನುಸಂಧಾನದಿಂದ ದೊರಕುವ ಅನುಭೂತಿ ಅನುಪಮ, ಅತಿಶಯ. ಲಲಿತಲವಂಗಲತಾಪರಿಶೀಲನಕೋಮಲಮಲಯಸಮೀರೇ|

ಮಧುಕರ-ನಿಕರ-ಕರಂಬಿತ-ಕೋಕಿಲ-ಕೂಜಿತ-ಕುಂಜ-ಕುಟಿರೇ ||

ಎಂಬ ಜಯದೇವನ ಗೀತಗೋವಿಂದದ ಸಾಲುಗಳೇ ಅದಕ್ಕೆ ಸಾಕ್ಷಿ. ಸುಭಾಷಿತಗಳು ಸಂಸ್ಕೃತಭಾಷೆಯ ವೈಶಿಷ್ಟ್ಯಗಳಲ್ಲಿ ಒಂದು. ಜೀವನಕ್ಕೆ ಮಾರ್ಗದರ್ಶಕವಾಗಿರುವ ಸುಂದರವಾದ ಸುಭಾಷಿತಗಳು ಮಹಾಕವಿಗಳ ಕಾವ್ಯಗಳಲ್ಲಿ ಹೇರಳವಾಗಿ ದೊರೆಯುತ್ತವೆ.

ಸಂಸ್ಕೃತಭಾಷೆಗೆ ಒಂದು ರೀತಿಯ ದಿವ್ಯತೆ ಇದೆ. ಆಧ್ಯಾತ್ಮ ಸಾಧಕರಿಗೆ, ದೈವಭಕ್ತರಿಗೆ ಮಾರ್ಗದರ್ಶನ ನೀಡುವ ಮುಖ್ಯ ಗ್ರಂಥಗಳು ಸಂಸ್ಕೃತದಲ್ಲೇ ಇವೆ. ವೇದಮಂತ್ರಗಳೇ ಆಗಿರಬಹುದು ಇಲ್ಲ ದರ್ಶನಗಳಾಗಿರಬಹುದು, ಭಗವದ್ಗೀತೆ, ಬ್ರಹ್ಮಸೂತ್ರ, ಉಪನಿಷತ್ತುಗಳಂತಹ ಆಧ್ಯಾತ್ಮಗ್ರಂಥಗಳಾಗಿರಬಹುದು ಅಥವಾ ಸರಳವಾದ ಸ್ತೋತ್ರಗಳಾಗಿರಬಹುದು ಅವುಗಳನ್ನು ಪಠಿಸಿದವರಿಗೆ ದಿವ್ಯಾನುಭೂತಿಯನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.  ಬ್ರಹ್ಮಾನಂದಸಹೋದರನೆಂದು ಕರೆಸಿಕೊಳ್ಳುವ ಕಾವ್ಯಾನಂದವೂ ಬಾಳಿಗೆ ದಿವ್ಯತೆಯನ್ನು ತರುತ್ತದೆ.

ಇಷ್ಟೆಲ್ಲ ವಿಶಾಲ ಸಾಹಿತ್ಯಪ್ರಪಂಚವನ್ನು ಹೊಂದಿದ್ದರೂ ಇಂದಿನ ಈ ಆಧುನಿಕಯುಗದಲ್ಲಿ ಸಂಸ್ಕೃತದ ಆವಶ್ಯಕತೆ ಇದೆಯೆ ಎಂಬ ಪ್ರಶ್ನೆ ಬೃಹದಾಕಾರವಾಗಿ ನಿಲ್ಲುತ್ತದೆ. ಅದರ ಜೊತೆಗೆ ಸಂಸ್ಕೃತವು ಕಬ್ಬಿಣದ ಕಡಲೆ, ಉಚ್ಚಕುಲದ ಭಾಷೆ, ಮೃತಭಾಷೆ ಮುಂತಾದ ತಪ್ಪು ಕಲ್ಪನೆಗಳು ಅನೇಕರನ್ನು ಇದರ ಅಭ್ಯಾಸದಿಂದ ವಿಮುಖರನ್ನಾಗಿಸುತ್ತವೆ.

ಆದರೆ ಸಂಸ್ಕೃತವು ಸರಳವಾದ, ಸಾಮಾಜಿಕಸಾಮರಸ್ಯವನ್ನು ವರ್ಧಿಸುವ ಅಮೃತಭಾಷೆ. ಇತ್ತೀಚಿನದಿನಗಳಲ್ಲಿ ಅದರ ಜನಪ್ರಿಯತೆ ಸಾಕಷ್ಟು ವಿಸ್ತರಿಸಿದೆ. ಇಂದಿನ ಯುವಪೀಳಿಗೆಯು ಸಂಸ್ಕೃತವನ್ನು ಕಲಿಯುವತ್ತ ಮನಮಾಡುತ್ತಿದೆ. ಸಂಸ್ಕೃತ ವಿಶ್ವವಿದ್ಯಾಲಯಗಳು, ಹಾಗೂ ಸಂಸ್ಕೃತಭಾರತಿಯಂತಹ ಸರಕಾರೇತರ ಸಂಸ್ಥೆಗಳು ಈ ನಿಟ್ಟಿನಲ್ಲಿ ಉತ್ಸಾಹದಿಂದ ಕೆಲಸಮಾಡುತ್ತಿವೆ. ಇಂದು ಅನೇಕ ಲಕ್ಷ ಜನರು ಸಂಸ್ಕೃತದಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು. ನವ್ಯ ಸಾಹಿತ್ಯಕೃಷಿಯಲ್ಲಿ ಸಾಕಷ್ತು ಯುವಕರು ತೊಡಗಿಸಿಕೊಂಡಿದ್ದಾರೆ.

ಸಂಸ್ಕೃತವೂ ಪ್ರಾಚೀನಭಾಷೆಯೇ ಆಗಿದ್ದರೂ ಆಧುನಿಕಭಾಷೆಯಾಗುವ ಎಲ್ಲ ಅರ್ಹತೆಗಳನ್ನೂ ಹೊಂದಿದೆ. ಐತಿಹಾಸಿಕ, ಸಾಮಾಜಿಕ ವಿಷಯವಸ್ತುವನ್ನು ಇಟ್ಟುಕೊಂಡು ರಚಿಸಲ್ಪಡುತ್ತಿರುವ ಆಧುನಿಕ ಸಂಸ್ಕೃತ ಸಾಹಿತ್ಯವೇ ಅದಕ್ಕೆ ಸಾಕ್ಷಿ. ಬೇರೆ ಬೇರೆ ಭಾಷೆಗಳ ಸಾಹಿತ್ಯದ ಸಂಸ್ಕೃತ ಅನುವಾದ ಕೂಡ ನಡೆಯುತ್ತಿದೆ. ಕನ್ನಡದ ಮೇರು ಲೇಖಕ ಎಸ್. ಎಲ್. ಭೈರಪ್ಪನವರ ಅನೇಕ ಕಾದಂಬರಿಗಳು ಸಂಸ್ಕೃತಕ್ಕೆ ಅನುವಾದಗೊಂಡಿದೆ.

ಇಂದಿನ ತಂತ್ರಜ್ಞಾನಯುಗದಲ್ಲಿ ತಂತ್ರಜ್ಞಾನಬಳಕೆಯಲ್ಲಾಗಲಿ, ತಂತ್ರಜ್ಞಾನನಿರ್ಮಾಣದಲ್ಲಾಗಲಿ ಸಂಸ್ಕೃತಭಾಷೆ ಹಾಗೂ ಸಂಸ್ಕೃತಜ್ಞರು ಹಿಂದೆ ಬಿದ್ದಿಲ್ಲ. ಇಂದು ಅಪಾರ ಸಂಸ್ಕೃತ ಗ್ರಂಥಗಳ ಡಿಜಿಟಲ್ ಆವೃತ್ತಿ ಅಂತರ್ಜಾಲದಲ್ಲಿ ಲಭ್ಯ ಇದೆ. ಸಂಸ್ಕೃತ ಅಧ್ಯಯನಕ್ಕಾಗಿ ಎಣಿಸಲಾಗದಷ್ಟು ಅಂತರ್ಜಾಲ ತಾಣಗಳು, ಮೊಬೈಲ್ ಎಪ್ ಗಳು, ಟೂಲ್ ಗಳು ಲಭ್ಯ ಇವೆ, ಹೊಸ ಹೊಸದರ ನಿರ್ಮಾಣ ನಡೆಯುತ್ತಲೇ ಇದೆ. ಆಯ್.ಆಯ್.ಟಿ. ಯಂತಹ ಸಂಸ್ಥೆಗಳು ಭಾರತೀಯ ಅಧ್ಯಯನ ವಿಭಾಗದಡಿ ಈ ನಿಟ್ಟಿನಲ್ಲಿ ಸಂಶೋಧನೆಗಳನ್ನು ಕೈಗೊಂಡಿವೆ. ಅನೇಕ ವಿದೇಶೀಯ ಸಂಸ್ಥೆಗಳೂ ಮಾಹಿತಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅತ್ಯಾಧುನಿಕ ಅಧ್ಯಯನ ಪರಿಕರಗಳನ್ನು ನಿರ್ಮಿಸಿವೆ. ಪಾಣಿನೀಯ ಅಷ್ಟಾಧ್ಯಾಯಿಯಂತಹ ಉದ್ಗ್ರಂಥಗಳೂ ಇಂದು ಬೆರಳತುದಿಯಲ್ಲಿ ಲಭ್ಯ ಇವೆ. ಪಾಣಿನೀಯ ವ್ಯಾಕರಣದ ಸಂರಚನೆಯ ಆಧಾರದಲ್ಲಿ ಕಂಪ್ಯೂಟರ್ ಪ್ರೊಗ್ರಾಮಿಂಗ್ ರಚಿಸುವ ಸಾಧ್ಯತೆಯ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ.

ಹೀಗೆ ಪ್ರಾಚೀನವು, ಆಧುನಿಕವು ಆದ ಸಂಸ್ಕೃತಭಾಷೆ ನಮ್ಮೆಲ್ಲರ ಜೀವನದ ಅಂಗವಾಗಬೇಕು. ಅನೇಕ ವಿಶ್ವವಿದ್ಯಾಲಯಗಳೂ, ಸ್ವಯಂ ಸೇವಾ ಸಂಸ್ಥೆಗಳೂ ಮನೆಯಲ್ಲೇ ಕುಳಿತು ಸಂಸ್ಕೃತ ಕಲಿಯಲು ಅವಕಾಶ ಮಾಡಿಕೊಡುತ್ತಿವೆ. ಈ ಭಾಷೆಯನ್ನು ಕಲಿಯಲು ವಯಸ್ಸಿನ ಮಿತಿ ಇಲ್ಲ. ನಾವೆಲ್ಲ ಇದನ್ನು ಕಲಿತು, ಕಲಿಸಿ, ಪ್ರಸರಿಸಿ ಧನ್ಯರಾಗುವ ಸಂಕಲ್ಪವನ್ನು ಈ ಶುಭದಿನದಂದು ಮಾಡೋಣ.

(ಶೋಭಕೃತ್ ಸಂವತ್ಸರದ ಸಂಸ್ಕೃತದಿನದಂದು  ಕೆ.ಎಲ್.ಇ. ಧ್ವನಿಯಲ್ಲಿ ಪ್ರಸಾರವಾದ ಉಪನ್ಯಾಸ)

ಯುವಕರಿಗೆ ಬೇಕು ಆತ್ಮಸ್ತೈರ್ಯ ಮತ್ತು ಸಮಚಿತ್ತತೆ

ಶೈಶವದಿಂದ ಕೌಮಾರ್ಯ, ಯೌವನಾವಸ್ಥೆಗಳಿಗೆ ವಯಸ್ಸು ಹೊರಳುವ ಹೊತ್ತಿಗೆ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಸ್ಥಿತಿಗತಿಗಳು ಪರಿವರ್ತನೆಯನ್ನು ಹೊಂದುತ್ತವೆ. ಅಂತಹ ಪರಿವರ್ತನೆ ನೈಸರ್ಗಿಕವೇ ಆದರೂ ಸರಿಯಾದ ಮಾರ್ಗದಲ್ಲಿ ಆಗದಿದ್ದರೆ ವಿಕಾಸದ ಹೊಸ್ತಿಲಲ್ಲಿ ವಿಕಾರದ ದರ್ಶನವಾಗುವ ಸಂಭವವಿರುತ್ತದೆ.

ಇಪ್ಪತ್ತೊಂದನೆಯ ಶತಮಾನದ ಯುವಕರಿಗೆ ಬೆಟ್ಟವನ್ನೇ ಎತ್ತಿ ಹಾಕುವ ಸಾಮರ್ಥ್ಯವಿದೆ. ಎದುರಿಗೆ ಬಂದ ಶತ್ರುಗಳನ್ನು ಕೊಚ್ಚಿಹಾಕುವ ಅಧ್ಭುತ ಶೌರ್ಯವಿದೆ, ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ ಕೆಚ್ಚೆದೆಯಿದೆ. ಆದರೆ ತನ್ನ ಒಳಗೆ ತನ್ನ ಆತ್ಮವನ್ನು ತಿನ್ನುವ ಸಣ್ಣ ಕ್ರಿಮಿಯ ವಿರುದ್ಧ ಹೋರಾಡುವ ಸಾಮರ್ಥ್ಯ ಕ್ಷೀಣಿಸುತ್ತಿದೆ. ಕಾರಣ ಏನು? ಚಿಂತಿಸಬೇಕಾದ ವಿಷಯ.

ಮಕ್ಕಳು ಹದಿನಾಲ್ಕು-ಹದಿನೈದು ವರ್ಷ ವಯಸ್ಸನ್ನು ತಲುಪಿದಾಗ ಇಂದು ಪಾಲಕರು ಕಟ್ಟೆಚ್ಚರ ವಹಿಸಬೇಕಾದ ಪರಿಸ್ಥಿತಿ ಇದೆ. ಅದು ಬಾಹ್ಯ ಆಕ್ರಮಣದ ಹೆದರಿಕೆಯಿಂದಲ್ಲ. ಮಕ್ಕಳ ಮನಸ್ಸಿನಲ್ಲಿ ಯಾವ ರೀತಿಯ ತುಮುಲಗಳು ನಡೆಯುತ್ತವೆ ಎಂದು ತಿಳಿಯದೆ ಮೂಡುವ ಭಯ. ಈ ಜಗತ್ತಿನಲ್ಲಿ ಪ್ರತಿ ೪೫ ಸೆಕೆಂಡುಗಳಿಗೆ ಒಂದು ಆತ್ಮಹತ್ಯೆ ನಡೆಯುತ್ತದಂತೆ. ಅದರಲ್ಲಿ ಹದಿಹರೆಯದವರ ಸಂಖ್ಯೆಯೇ ಹೆಚ್ಚು.

ಇದಕ್ಕೆಲ್ಲ ಕಾರಣಗಳನ್ನು ಹುಡುಕುತ್ತ ಹೋದರೆ ಒಬ್ಬೊಬ್ಬರದು ಒಂದೊಂದು ಕಾರಣ. ಒಬ್ಬನ ಕಾರಣವನ್ನು ಇನ್ನೊಬ್ಬರಿಗೆ ಅನ್ವಯಿಸುವಂತಿಲ್ಲ. ಕೆಲವೊಂದು ಬಾಹ್ಯ ಕಾರಣಗಳಾದರೆ ಇನ್ನು ಕೆಲವು ಆಂತರಿಕ. ಎಣೆಯಿಲ್ಲದೆ ವಿಶಾಲವಾಗುತ್ತಿರುವ ಸಮಾಜ ಒಂದೆಡೆಯಾದರೆ ಈ ಸಮಾಜದಲ್ಲಿ ’ನಾನು’ ಏನು ಎಂಬುದನ್ನು ಅರ್ಥಮಾಡಿಕೊಳ್ಳಲಾಗದ ಅಸಹಾಯಕ ಸ್ಥಿತಿ ಇನ್ನೊಂದೆಡೆ.

ಕಾಲ ಬದಲಾಗಿದೆ. ತಂತ್ರಜ್ಞಾನ ಎಂಬ ದೈವೀ ಗುಣವನ್ನೂ ಆಸುರೀಗುಣವನ್ನೂ ಒಟ್ಟಿಗೇ ಹೊಂದಿರುವ ಮಾಯೆ ಜಗತ್ತನ್ನು ಆವರಿಸಿದೆ. ’ವಸುಧೈವ ಕುಟುಂಬಕಮ್’ ಎಂಬ ನಮ್ಮ ಪೂರ್ವಜರ ಪರಿಕಲ್ಪನೆಗೆ ಹೊಸ ಭಾಷ್ಯವನ್ನು ಈ ತಂತ್ರಜ್ಞಾನ ಬರೆಯುತ್ತಿದೆ. ’ಆನೋ ಭದ್ರಾಃ ಕೃತವೋ ಯಂತು ವಿಶ್ವತಃ’ ಎಂಬ ನುಡಿಯನ್ನು ಅನುಸರಿಸಿ ತಮ್ಮ ಅರಿವನ್ನು ಸಂಪೂರ್ಣ ಜಗತ್ತಿಗೆ ವಿಸ್ತರಿಸುವ ಭರದಲ್ಲಿ ಒಳ್ಳೆಯದೂ ಕೆಟ್ಟದ್ದೂ ನಮ್ಮೊಳಗೆ ಪ್ರವೇಶಿಸಿ ನೀರಕ್ಷೀರವಿಭಾಗ ಸಾಮರ್ಥ್ಯದ ಅಭಾವದಲ್ಲಿ ಅವಾಂತರಗಳನ್ನು ಸೃಷ್ಟಿಸುತ್ತಿದೆ.

’ಕಾಮ ಏಷ ಕ್ರೋಧ ಏಷ ರಜೋಗುಣಸಮುದ್ಭವಃ’ ಎಂಬ ಗೀತೆಯ ನುಡಿ ಇಂಥವರಿಗೇ ಅನ್ವಯಿಸುವಂಥದ್ದು. ಅತಿಯಾದ ಮೊಬೈಲ್ ಬಳಕೆ, ಆಹಾರಪದ್ಧತಿ, ಜೀವನಕ್ರಮಗಳಿಂದ ಮನುಷ್ಯನಲ್ಲಿ ಸಾತ್ತ್ವಿಕಗುಣ ಕ್ಷೀಣಿಸುತ್ತಿದೆ. ಅದರ ಸ್ಥಾನವನ್ನು ರಜೋಗುಣ ಆಕ್ರಮಿಸಿಕೊಳ್ಳುತ್ತಿದೆ. ಮನಸ್ಸು ಚಂಚಲವಾಗುತ್ತಿದೆ, ವ್ಯಗ್ರವಾಗುತ್ತಿದೆ. ಅದನ್ನು ನಿಯಂತ್ರಿಸುವ ದಾರಿ ಇಂದಿನ ಯುವ ಜನತೆಗೆ ತೋರುತ್ತಿಲ್ಲ. ಮಿತ್ರಸಮ್ಮಿತವಾಗಿ ಮಾರ್ಗದರ್ಶನ ಮಾಡುವ ಕೃಷ್ಣರನ್ನು ಕಾಣದೆ ಈ ಅರ್ಜುನರು ಪರಿತಪಿಸುತ್ತಿದ್ದಾರೆ.

ಇಂದಿನ ಯುವ ಜನತೆಯಲ್ಲಿ ದೇವರ ವಿಷಯದಲ್ಲಿ, ಆಧ್ಯಾತ್ಮ ವಿಷಯದಲ್ಲಿ ಏನೊ ಅಸಡ್ಡೆ. ಅವೆಲ್ಲ ನಿವೃತ್ತರಾದ ವೃದ್ಧರ ಸಮಯಯಾಪನೆಯ ಸಾಧನ ಎಂಬುದು ಕೆಲವರ ಅಭಿಪ್ರಾಯ. ಇಂದಿನ ಅವಾಂತರಗಳಿಗೆ ಅದೂ ಒಂದು ಕಾರಣ. ದಿನದ ಇಪ್ಪತ್ತನಾಲ್ಕು ಘಂಟೆಗಳಲ್ಲಿ ಸ್ವಲ್ಪ ಕಾಲವನ್ನಾದರೂ ಇಂತಹ ಕೆಲಸಗಳಿಗೆ ಮೀಸಲಿಟ್ಟರೆ ಮನಸ್ಸನ್ನು ಸುಲಭವಾಗಿ ನಿಯಂತ್ರಿಸಬಹುದು. ಡಿ.ವಿ.ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಇದನ್ನು ಸೊಗಸಾಗಿ ಹೇಳಿದ್ದಾರೆ.

ದೇವಮಂದಿರ ಭಜನೆ ಪೂಜೆ ಪ್ರಸಾದಗಳು

ಜೀವನದಲಂಕಾರ ಮನಸಿನುದ್ಧಾರ|

ಭಾವವಂ ಕ್ಷುಲ್ಲಜಗದಿಂ ಬಿಡಿಸಿ ಮೇಲಕೊಯ್ವು

ದಾವುದಾದೊಡಮೊಳಿತು - ಮಂಕುತಿಮ್ಮ ||

ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಆತ್ಮನಿರ್ವಹಣೆ (Self-Management) ಯ ವಿಷಯದಲ್ಲಿ ಸಾಕಷ್ಟು ವಿಚಾರಗಳು ಸಿಗುತ್ತವೆ. ನಮ್ಮ ಉಪನಿಷತ್ತುಗಳು ಹಾಗೂ ಭಗವದ್ಗೀತೆ ಪ್ರಣೀತವಾದದ್ದು ಈ ಉದ್ದೇಶದಿಂದಲೇ. ಕಠೋಪನಿಷತ್ತಿನ ನಚಿಕೇತನಾಗಲಿ, ಛಾಂದೋಗ್ಯ ಉಪನಿಷತ್ತಿನ ಶ್ವೇತಕೇತುವಾಗಲೀ ಭಗವದ್ಗೀತೆಯ ಅರ್ಜುನನಾಗಲೀ ವಿಭಿನ್ನ ಸಂದರ್ಭಗಳಲ್ಲಿ ನಮ್ಮನ್ನೇ ಪ್ರತಿನಿಧಿಸುತ್ತಾರೆ. ಇಂದು ಇಂತಹ ಕಥೆಗಳ ಅನುಸಂಧಾನ ಮನೆಗಳಲ್ಲಿ ನಡೆಯುತ್ತಿಲ್ಲ. ಎಲ್ಲವನ್ನೂ ಟಿ.ವಿ. ಎಂಬ ಮಾಯಾ ಪೆಟ್ಟಿಗೆ, ಧಾರಾವಾಹಿಯೆಂಬ ಮನೆಹಾಳು ಕಥೆಗಳ ಪ್ರವಾಹ ಕೊಚ್ಚಿಹಾಕುತ್ತಿದೆ. ಮಕ್ಕಳಿಗೆ ಸ್ವಲ್ಪಮಟ್ಟಿಗಾದರೂ ಆಧ್ಯಾತ್ಮದಲ್ಲಿ, ನಮ್ಮ ಪ್ರಾಚೀನ ಸಂಸ್ಕೃತಿಯ ವಿಷಯದಲ್ಲಿ ಮಾರ್ಗದರ್ಶನ ದೊರೆತರೆ ಸಮಾಜದ ಪಿಡುಗು ಕಡಿಮೆಯಾಗಬಹುದು.

ಭಗವದ್ಗೀತೆಯಲ್ಲಿ ಶ್ರೀಕೃಷ್ಣ “ಉದ್ಧರೇದಾತ್ಮನಾತ್ಮಾನಂ” ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ. ತನ್ನನ್ನು ತಾನೇ ಉದ್ಧರಿಸಿಕೊಳ್ಳಬೇಕು. ’ನಾನು’ ಎನ್ನುವ ಕಲ್ಪನೆ ಮೂಡುವ ಹದಿಹರೆಯದಲ್ಲಿ ಈ ಮಾತು ಗಮನಾರ್ಹವಾಗುತ್ತದೆ. ಅಹಂಕಾರವಾಗಿ ಪರಿವರ್ತನೆಯಾಗಬಾರದ ಸ್ವಾಭಿಮಾನ ರೂಪುಗೊಳ್ಳುವ ಹೊತ್ತದು. ತಾನು ಮುಂದೆ ಜೀವನದಲ್ಲಿ ಏನು ಮಾಡಬೇಕು ಎಂಬುದು ಮೂರ್ತಸ್ವರೂಪವನ್ನು ಪಡೆದುಕೊಳ್ಳುವ ಸಮಯವದು. ಹಾಗಾಗಿ ಆ ವಯಸ್ಸು ಅತ್ಯಂತ ಮಹತ್ತ್ವದ್ದೆನಿಸಿಕೊಳ್ಳುತ್ತದೆ. ಆ ಸಮಯದಲ್ಲಿ ಮನಸ್ಸನ್ನು ದೌರ್ಬಲ್ಯಕ್ಕೆ ಜಾರಿಸಿದರೆ ಅಪಾಯ ಕಟ್ಟಿಟ್ಟಬುತ್ತಿ. ಆ ಹೊತ್ತಿನಲ್ಲಿ “ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ” ಎನ್ನುವ ಗೀತಾಚಾರ್ಯನ ಗರ್ಜನೆ ಮನದಲ್ಲಿ ಮೊಳಗಬೇಕು. ಜಗತ್ತಿನ ವಿಶ್ವರೂಪತೆಯನ್ನು ಕಂಡು ಸಂಭ್ರಾಂತರಾಗುವ ಬದಲು ತಾನು ’ಅತ್ಯತಿಷ್ಠದ್ದಶಾಂಗುಲಮ್’ ಎಂಬಂತೆ ತ್ರಿವಿಕ್ರಮನಾಗಿ ಬೆಳೆಯಲು ಯೋಜನೆಯನ್ನು ಹಾಕಬೇಕು.

ಬೆಳೆಯನ್ನು ಬೆಳೆಯುವಾಗ ಕಳೆಯನ್ನು ಕೀಳಬೇಕಾದ್ದು ಅನಿವಾರ್ಯ. ಇಲ್ಲವಾದರೆ ಕಳೆಯೇ ಬೆಳೆಯನ್ನು ನಾಶಪಡಿಸುತ್ತದೆ. ನಮ್ಮಲ್ಲಿರುವ ಅರಿಷಡ್ವರ್ಗವೆಂಬ ಕಳೆಗಳನ್ನು ಕಿತ್ತೊಗೆಯದಿದ್ದರೆ ಸಂಸ್ಕಾರದ ಬೆಳೆ ಬೆಳೆಯಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿಯೂ ಯುವ ಜನತೆ ಯೋಚಿಸಬೇಕಾದ ಆವಶ್ಯಕತೆಯಿದೆ.

ತಮ್ಮ ಸಾಮರ್ಥ್ಯಕ್ಕಿಂತ ಮಿಗಿಲಾದ ಗುರಿಯನ್ನು ಇಟ್ಟುಕೊಳ್ಳುವುದು ಹಾಗೂ ಅದನ್ನು ಮುಟ್ಟಲು ಸಾಧ್ಯವಾಗದೇ ಇದ್ದಾಗ ನಿರಾಶರಾಗುವುದು ಇಂದಿನ ಯುವ ಪೀಳಿಗೆಯ ಇನ್ನೊಂದು ಲಕ್ಷಣ. ಲಾಭಾಲಾಭಗಳಲ್ಲಿ, ಜಯಾಪಜಯಗಳಲ್ಲಿ ಸಮಚಿತ್ತತೆಯನ್ನು ಕಾಯ್ದುಕೊಳ್ಳುವ ಮನಸ್ಥಿತಿ ಎಲ್ಲರ ಆವಶ್ಯಕತೆ. ಮುಳುಗಿದ ಸೂರ್ಯ ಮತ್ತೆ ಉದಯಿಸುವಂತೆ, ಕ್ಷೀಣನಾದ ಚಂದ್ರ ಮತ್ತೆ ಪೂರ್ಣನಾಗುವಂತೆ, ಕತ್ತರಿಸಲ್ಪಟ್ಟ ಮರ ಮತ್ತೆ ಚಿಗಿತು ಬರುವಂತೆ ಸೋಲಿನಿಂದ ಗೆಲುವಿಗೆ ಹೋಗಬಹುದು ಎಂಬುದನ್ನು ಮರೆಯಬಾರದು. ಸಣ್ಣ ಸಣ್ಣ ಕಾರಣಗಳಿಗೆಲ್ಲ ಜೀವವನ್ನು ತೆಗೆದುಕೊಳ್ಳುವಷ್ಟು ದುರ್ಬಲರು ನಾವಾಗಬಾರದು. ಅಪಮಾನವನ್ನೂ ವಿಜಯವನ್ನಾಗಿ ಪರಿವರ್ತಿಸಿಕೊಳ್ಳುವ ಚಾಣಕ್ಯರು ನಾವಾಗಬೇಕು. ಅದರಂತೆಯೇ ಪುರಸ್ಕಾರ ಗೌರವಗಳನ್ನು ಪಡೆದಾಗ ಅತಿಯಾಗಿ ಬೀಗಬಾರದು. ಡಿವಿಜಿಯವರು ಮ್ಯಾಕ್ ಬೆತ್ ನಾಟಕದ ಅನುವಾದದ ಮುನ್ನುಡಿಯಲ್ಲಿ ಹೇಳುವಂತೆ

ಉತ್ಸವದೊಳೆಚ್ಚರಿರು

ಹೂ ಬನದ ತಳದಲ್ಲಿ ಹಾವು ಹರಿದೀತು

ಪ್ರೋತ್ಸಹನೆ ಕೇಳಿಬರೆ

ಪರೀಕ್ಷಿಸಿಕೋ ನಿನ್ನ

ಮೆಚ್ಚು ಮಿತಿಮೀರಲ್

ಹುಚ್ಚು ಹುಚ್ಚಾಯ್ತು

ಪ್ರೀತಿಯಲಿ ನೀತಿ ಸೆಲೆ

ಮರೆತು ಹೋದೀತು

ಗೆಲುವಿನಾತುರದಿ ಕಾಲ್

ಜಾರಿ ಕುಸಿದೀತು

ಉಪಸಂಹಾರ: ಯುವಜನತೆಯ ಇಂದಿನ ಸಮಸ್ಯೆಗೆ ಎದೆಗುಂದದ ಆತ್ಮಸ್ತೈರ್ಯ ಮತ್ತು ಸಮಚಿತ್ತತೆಯೇ ಪರಿಹಾರ. ಅದಕ್ಕೆ ಹಿರಿಯರ ಮಾರ್ಗದರ್ಶನವೂ ಅಗತ್ಯ. ಪಾಲಕರು ಮಕ್ಕಳಿಗೆ ಇದನ್ನು ಮಾತಿನಿಂದ ಬೋಧಿಸದೇ ತಾವೇ ಉದಾಹರಣೆಯಾಗಿ ನಿಲ್ಲಬೇಕು. ತಂದೆ ತಾಯಿಗಳೇ ನಿಜವಾದ ಹೀರೋ ಹೀರೋಯಿನ್ ಆಗಬೇಕು. ಶಾಲೆಯ ಶಿಕ್ಷಕರೂ ಕೇವಲ ಮಾಹಿತಿಯ ಪೆಟ್ಟಿಗೆಯಾಗದೆ ಮಾರ್ಗದರ್ಶನ ಮಾಡುವ ಸಮಾಲೋಚಕರಾಗಬೇಕು. ಆರೋಗ್ಯವಂತ ಸಮಾಜದ ನಿರ್ಮಾಣ ಎಲ್ಲರ ಹೊಣೆ.

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...