Wednesday, September 21, 2016

ತಿಂಗಳಿಗೊಂದು ಪುಸ್ತಕ - ೪

ಕ್ಷಣ ಹೊತ್ತು ಆಣಿ ಮುತ್ತು’ ಹೊಟೆಲ್ ಉದ್ಯಮಿ ಎಸ್. ಷಡಕ್ಷರಿಯವರ ಕೃತಿ. ಅಂದಾಕ್ಷಣ ಅದು ಹೊಟೆಲ್ ಉದ್ಯಮಕ್ಕೆ ಸಂಬಂಧಿಸಿದ ಪುಸ್ತಕವಲ್ಲ. ಶಾಲಾ ಕಾಲೇಜುಗಳಲ್ಲಿ ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ನಡೆಸಿಕೊಡುವ ಷಡಕ್ಷರಿಯವರು ತಮ್ಮ ಅಪಾರ ಅನುಭವದಿಂದ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರತಿದಿನ ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹ ಇದು.

ಈ ಕೃತಿಯ ಹೆಸರು ಒಂದು ಅನ್ವರ್ಥನಾಮ. ಧಾವಂತದ ಜೀವನದಲ್ಲಿ ಒಂದು ಕ್ಷಣ ನಿಂತು ಯೋಚಿಸಬೇಕಾದ ಚಿಂತನೆಯ ಮುತ್ತುಗಳ ಸಂಕಲನ ಇದು. ಹಾಗಂತ ಒಣ ತತ್ತ್ವಶಾಸ್ತ್ರವಿಲ್ಲ ಇಲ್ಲಿ. ಜೀವನ ಮೂಸೆಯಲ್ಲಿ ಬೆಂದು ಪಕ್ವವಾದ ಅನೇಕ ಜೀವಿಗಳ ಜೀವನದರ್ಶನ ಪ್ರತಿಯೊಂದು ಮುತ್ತಿನಲ್ಲಿಯೂ ಅಡಕವಾಗಿದೆ. ಇಲ್ಲಿ ಉಲ್ಲಿಖಿತವಾದ ಘಟನೆಗಳು ಸಾಮಾನ್ಯ ವ್ಯಕ್ತಿಯ ಜೀವನದಲ್ಲೂ ಬಂದು ಹೋಗುವಂತವೇ. ಆದರೆ ಅಂತಹ ಸಂದರ್ಭಗಳಲ್ಲಿ ವರ್ತಿಸುವ ರೀತಿಯೇ ಅಸಾಮಾನ್ಯರನ್ನು ಸಾಮಾನ್ಯರಿಂದ ಭಿನ್ನವಾಗಿ ನಿಲ್ಲಿಸುತ್ತದೆ. ವ್ಯಕ್ತಿತ್ವ ವಿಕಸನದ ಮುಖ್ಯ ಪಾಠ – ’ಜೀವನದಲ್ಲಿ ಆಶಾವಾದಿಯಾಗಿರಿ. ನಿಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆ ಇಡಿ’ ಎಂಬುದೇ ಆಗಿದೆ ಎಂದು ನಮಗೆಲ್ಲ ಗೊತ್ತು. ಇಲ್ಲಿನ ಬರಹಗಳೆಲ್ಲ ಅದನ್ನೇ ಹೇಳುತ್ತಿದ್ದರೂ ಇಲ್ಲಿರುವ ದೃಷ್ಟಾಂತಗಳು ಮನಮುಟ್ಟುವಂತಿದೆ. ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡವರನ್ನೂ ಎಬ್ಬಿಸಿ ನಿಲ್ಲಿಸುವ ಸಾಮರ್ಥ್ಯವನ್ನು ಈ ಬರಹಗಳು ಹೊಂದಿವೆ ಎಂದರೆ ಅತಿಶಯೋಕ್ತಿಯಾಗಲಾರದು. ಕೃತಿಯ ಹೆಸರೇ ಹೇಳುವಂತೆ ಒಂದೇ ಪೇಜಿಗೆ ಸೀಮಿತವಾದ ಚಿಕ್ಕ ಚಿಕ್ಕ ಬರಹಗಳಿವೆ. ಕಥಾಪ್ರಿಯರೂ, ಪ್ರಬಂಧದ ಓದುಗರೂ ಸಮಾನವಾದ ಆನಂದವನ್ನು ಈ ಕೃತಿಯಿಂದ ಪಡೆಯಬಹುದು.


ಎಸ್.ಎಲ್.ಭೈರಪ್ಪನವರ ಮುನ್ನುಡಿ, ವಿಶ್ವೇಶ್ವರ ಭಟ್ಟರ ಹಿನ್ನುಡಿ, ಕನ್ನಡದ ಖ್ಯಾತನಾಮ ಬರಹಗಾರರ ಚೆನ್ನುಡಿಗಳು ೭೫ ಮುತ್ತುಗಳ ಸರಸ್ವತಿಯ ಹಾರಕ್ಕೆ ಮೆರಗನ್ನು ನೀಡಿವೆ. ೯೦ ದಿನಗಳಲ್ಲಿ ದಾಖಲೆಯ ೫೦೦೦೦ ಸಾವಿರ ಪ್ರತಿಗಳು ಮಾರಾಟವಾಗಿದ್ದು ೧೦ ಬಾರಿ ಮುದ್ರಣಗೊಂಡಿವೆ. ಸುಂದರ ಮುಖಪುಟ, ತಪ್ಪಿಲ್ಲದ ಮುದ್ರಣ, ಕೇವಲ ೭೫ ರೂಪಾಯಿಯಷ್ಟು ಕಡಿಮೆ ಬೆಲೆ ಪುಸ್ತಕದ ಮೌಲ್ಯವನ್ನು ಹೆಚ್ಚಿಸಿವೆ. ಕನ್ನಡ ಬಲ್ಲವರೆಲ್ಲ ಓದಿ ಮನನ ಮಾಡಬೇಕಾದ ಉತ್ಕೃಷ್ಟ ಕೃತಿಯಿದು.

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...