Sunday, March 28, 2021

इन्दुमती

 

रघुवंशमहाकाव्ये वर्णितेषु रमणीमणीषु इन्दुमती अन्यतमा। षष्ठे सर्गे कविना विदर्भराजसोदर्याः स्वयंवरस्य मनोहारि वर्णनमकारि।

इन्दुमत्याः सौन्दर्यम् अवर्णनीयमासीत्। ’तस्मिन् विधानातिशये विधातुः’ इति कवयति कविवरः। इन्दुमतिः सृष्टिकर्तुः विशिष्टा सृष्टिः इति तस्य भावः। तत्रैव कस्मिंश्चित् पद्ये ताम् ’आवर्तमनोज्ञनाभिः’ इति वर्णयति। अपरस्मिन् पद्ये ’रोचनागौरशरीरयष्टिः’ वर्णिता सा।

इन्दुमत्याः वर्णने सुवर्णरेखितमिदं पद्यम्-

सञ्चारिणीदीपशिखेव रात्रौ यं यं व्यतीयाय पतिंवरा सा।

नरेन्द्रमार्गाट्ट इव प्रपेदे विवर्णभावं स स भूमिपालः॥

राजसभायां वरणीयानां परिचयं प्राप्य अग्रे सरन्ती इन्दुमती सञ्चारिण्या दीपशिखया उपमिता कविवर्येण। अद्भुता खल्वियं प्रतिमा! इन्दुमत्याः मुखकान्तिः दीपशिखायाः कान्तिरिव प्रज्वला अवर्तत। तां परिणेतुं स्पृहमाणाः नृपात्मजाः यदा तया तिरस्कृताः अभूवन् तदा निराशाविष्टवदनाः समभवन् । राजमार्गे दीपशिखायाम् अग्रे गतायां यथा पृष्टतः स्थितानि भवनानि कृष्णच्छायान्वितानि भवन्ति तथैव वैदर्भ्या तिरस्कृताः भूपतयः विच्छायवदनाः सञ्जाताः इति वर्णयतः कवेः कल्पनाविलासः अन्यादृश एव। अनया रचनया कालिदासः ’दीपशिखा’ कालिदासः इति प्रख्यातो वरीवर्तते।

स्वयंवरमण्डपे यदा सा राघवस्य अजस्य पुरतः स्थित्वा सुनन्दया तद्विषये कथितं सर्वम् आकर्णयत्, तदा किं प्रवृत्तमिति कविः पद्यद्वयेन वर्णयति।

ततः सुनन्दावचनावसाने लज्जां तनूकृत्य नरेन्द्रकन्या।

दृष्ट्या प्रसादामलया कुमारं प्रत्यग्रहीत्संवरणस्रजेव॥

सा यूनि तस्मिन्नभिलाषबन्धं शशाक शालीनतया न वक्तुम्।

रोमाञ्चलक्ष्येण स गात्रयष्टिं भित्वा निराक्रामदरालकेश्याः॥

स्वस्याः लज्जां लघूकृत्य राजकुमारं दृष्टवत्यपि अपरक्षणे स्वाभिलाषं वक्तुकामा शालीनतया तूष्णीमतिष्ठत्। सुनन्दायाम् अग्रे व्रजामः इत्युक्तवत्यां इन्दुमती असूयाकुटिलं तां ददर्श इति वर्णयन् तस्याः मनसः द्वन्द्वभावं कविः अनुपमं चित्रितवान्। 

अजेन्दुमत्योः दाम्पत्यजीवनम् आनन्दसन्दोहसन्निविष्टमासीत्। प्रेमवर्षणे परिक्लिन्नयोः तयोः दशरथो नाम पुत्रोऽजायत। परन्तु अयमानन्दः दीर्घकालं नातिष्ठत्। आकाशमार्गे विचरतः नारदमहर्षेः महतीवीणायाः च्युता कुसुममाला पत्या सह विहरन्त्याः इन्दुमत्याः उपरि पतित्वा तस्याः प्राणानपाहरत्। 

अकाले प्रतिपन्नं प्रियावियोगम् असहमानः अजः महता दुःखेन विललाप। तया सार्धं यापितानि मधुरक्षणानि स्मरन् तस्याः गुणगानमकरोत्। तेन रुदता उक्तम् किञ्चित् वचनं इन्दुमत्याः व्यक्तित्वं सम्यक् परिचाययति।

गृहिणी सचिवः सखी मिथः प्रियशिष्या ललिते कलाविधौ।

इन्दुमती सद्गृहिणी आसीत्। राजकार्येषु कौटुम्बिककर्मसु च कान्तासम्मिततया आवश्यकसूचनादानं कुर्वती सा सचिवकार्यमपि न्यर्वहत्। आन्तरङ्गिकभावनोद्घाटने सा प्रियसखी आसीत्। ललितकलाध्ययने प्रियशिष्या अवर्तत। 

कलमन्यभृतासु भाषितं कलहंसीषु मदालसं गतम्।

पृषतीषु विलोलमीक्षितं पवनाधूतलतासु विभ्रमाः॥

एतस्मिन् पद्ये स्वर्गं जिगमिषुः इन्दुमती अजस्य समाधानार्थं प्रकृतेः विविधेषु अङ्गेषु स्वस्य लास्यं निक्षिप्य अगच्छदिति कविः वर्णयति। कोकिलानां कूजने भाषणं, कलहंसीषु मन्दगमनं, हरिणीषु दृष्टिं, वायुना चलन्तीषु लतासु विलासचलनं च अजः पश्यति। परन्तु तैः स्वस्य व्यथानिवारणं न भवतीति सः विलपति।

बहुविधसौरभयुक्तं पुष्पं पुष्पदर्शनात् अकाल एव अनश्यत्।

हरिणी नाम अप्सराः तृणबिन्दोः तपोभङ्गार्थं स्वर्गाधिपतिना प्रेषिता आसीत्। मुनेः शापेन सा कथकैशिकवंशे इन्दुमतीनाम्ना मानवजन्म अप्राप। सुरपुष्पदर्शनेन तस्याः शापविमोचनं भवतीति तृणबिन्दुना निगदितमविद्यत। तदनुसारं नारदवीणाच्युतं नाकपुष्पं तस्याः शापविमोचनमकरोत्।

सूर्यवंशगुरुः वसिष्ठः वृत्तान्तमिदं शिष्यद्वारा अजं श्रावयित्वा तं समाश्वासितवान्।

कालिदासस्य स्त्रीपात्रेषु लालित्यसौन्दर्यसौकुमार्यादिगुणोपेता इन्दुमतीमूर्तिः सहृदयमनोहारिणी वर्तते । 

Thursday, March 25, 2021

ಚೂಡಾಲಾ

 ಸೌರಾಷ್ಟ್ರದ ರಾಜಕನ್ಯೆ ಚೂಡಾಲಾ ವೇದಶಾಸ್ತ್ರಗಳಲ್ಲಿ ಪಾರಂಗತಳೂ ಯೋಗಸಿದ್ಧಿಯನ್ನು ಪಡೆದವಳೂ ಆಗಿದ್ದಳು. ಮಾಲವ ನರೇಶ ಶಿಖಿಧ್ವಜನನ್ನು ವರಿಸಿ, ಸಂಸಾರ ಸುಖವನ್ನು ಅನುಭವಿಸುತ್ತಲೇ ಪತಿಯನ್ನು ಆಧ್ಯಾತ್ಮಮಾರ್ಗದಲ್ಲಿ ಕರೆದೊಯ್ದಳು. ಶಿಖಿಧ್ವಜನಿಗೆ ದೇಹದಂಡನೆಯ ಮೂಲಕ ಸಾಧನೆ ಮಾಡುವ ತಪಶ್ಚರ್ಯಾದಿಗಳಲ್ಲಿ ಶ್ರದ್ಧೆಯಿತ್ತು. ಒಂದಿನ ರಾತ್ರಿ ಅರಮನೆಯನ್ನು ಬಿಟ್ಟ ಅರಸ ವನದಲ್ಲಿ ತಪಸ್ಸನ್ನಾರಂಭಿಸಿದ. ಅವನನ್ನು ಹುಡುಕಿಕೊಂಡು ಬಂದ ಚೂಡಾಲಾ ಅಲುಗಾಡಿಸಿದರೂ ಸಮಾಧಿ ಸ್ಥಿತಿಯಿಂದ ಏಳಲಿಲ್ಲ. ಚೂಡಾಲಾ ಅರಮನೆಗೆ ಹಿಂದಿರುಗಿ ಬಂದು ರಾಜ್ಯಸೂತ್ರವನ್ನು ಕೈಗೆತ್ತಿಕೊಂಡಳು. ಕೆಲ ದಿನಗಳ ನಂತರ ಮಂತ್ರಿಗಳಿಗೆ ರಾಜ್ಯದ ಜವಾಬ್ದಾರಿಯನ್ನು ವಹಿಸಿ ತನ್ನ ಯೌಗಿಕ ಶಕ್ತಿಯಿಂದ ಕುಂಭನೆಂಬ ಪುರುಷನಾಗಿ ಪರಿವರ್ತನೆಯನ್ನು ಹೊಂದಿ ಪತಿಯೆಡೆಗೆ ಬಂದಳು. ಬೆಳಗಿನ ಹೊತ್ತು ಅವನನ್ನು ಸಂಧಿಸಿ ಅವನೊಂದಿಗೆ ಇರಲು ಅನುಮತಿಯನ್ನು ಪಡೆದಳು.  ಸಂಜೆಯಾಗುತ್ತಲೇ ಹಗಲಿನಲ್ಲಿ ಗಂಡಾಗಿಯೂ ರಾತ್ರಿಯಲ್ಲಿ ಹೆಣ್ಣಾಗಿಯೂ ಇತುವಂತೆ ದುರ್ವಾಸರ ಶಾಪ ತನಗೆ ತಟ್ಟಿದೆಯೆಂದು ತಿಳಿಸಿ ರಾತ್ರಿಯೂ ಅಲ್ಲಿರಲು ಅವಕಾಶವನ್ನು ಬೇಡಿದಳು. ಈಗಾಗಲೇ ಗಂಡು-ಹೆಣ್ಣು ಎಂಬ ಭೇದಭಾವವನ್ನು ಮೆಟ್ಟಿ ನಿಂತಿದ್ದ ಶಿಖಿಧ್ವಜ ನಿರಾಕರಿಸಲಿಲ್ಲ. ರಾತ್ರಿಯಲ್ಲಿ ಮದನಿಕೆ ಎಂಬ ಸುಂದರ ಸ್ತ್ರೀಯಾಗಿ ಪರಿವರ್ತನೆಯನ್ನು ಹೊಂದಿ ಶಿಖಿಧ್ವಜನನ್ನು ಕಾಮೋದ್ರೇಕಕ್ಕೆ ಒಳಪಡಿಸಲೂ ಯತ್ನಿಸಿದಳು. ಆದರೆ ಶಿಖಿಧ್ವಜ ಯಾವುದೇ ಪ್ರಚೋದನೆಗೊಳಗಾಗಲಿಲ್ಲ. ಅವಳು ಮಾಡುವ ಯಾವ ಕ್ರಿಯೆಯನ್ನೂ ವಿರೋಧಿಸಲೂ ಇಲ್ಲ. ನಿರ್ಲಿಪ್ತ ಭಾವದಿಂದ ಪತ್ನಿಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ.

ಕುಂಭನ ವೇಷದಲ್ಲಿದ್ದ ತನ್ನ ಹೆಂಡತಿಯ ಮಾರ್ಗದರ್ಶನದಂತೆ ತಾನಂಟಿಕೊಂಡಿರುವ ಒಂದೊಂದೇ ವಸ್ತುವನ್ನು ಶಿಖಿಧ್ವಜ ತ್ಯಜಿಸಿದ, ಆಶ್ರಮ, ದಂಡ, ಕಮಂಡಲ, ಆಸನ, ಜಪಮಾಲೆ ಎಲ್ಲವನ್ನೂ ಬಿಟ್ಟಾಯಿತು. ಕೊನೆಗೆ ದೇಹವನ್ನೂ ತ್ಯಜಿಸುವ ಹಂತಕ್ಕೆ ಬಂದ. ಆಗ ಚೂಡಾಲಾ ಅವನಿಗೆ ದೇಹಧಾರಣೆ ಮಾಡಿಯೂ ಜೀವನ್ಮುಕ್ತನಾಗಿ ಉಳಿಯುವ ಬಗೆಯನ್ನು ತೋರಿಸಿಕೊಟ್ಟಳು. ಅವನು ಆ ಸ್ಥಿತಿಯನ್ನು ತಲುಪಿದ ಮೇಲೆ ಮತ್ತೆ ಅವನನ್ನು ರಾಜ್ಯಕ್ಕೆ ಕರೆತಂದು ಕರ್ತವ್ಯದಲ್ಲಿ ತೊಡಗಿಸಿದಳು. ಪದ್ಮಪತ್ರದ ಮೇಲಿನ ನೀರ ಹನಿಗಳಂತೆ ನಿರ್ಲಿಪ್ತರಾಗಿ ಅನೇಕ ವರ್ಷಗಳ ಕಾಲ ರಾಜ್ಯಭಾರವನ್ನು ನಡೆಸಿ ಪರಂಧಾಮವನ್ನು ಸೇರಿದರು. (ಯೋಗವಾಸಿಷ್ಠದಲ್ಲಿರುವ ಕಥೆ. ವಾಲ್ಮೀಕಿರಾಮಾಯಣದ ಒಂದು ಭಾಗವೆಂದು ಪ್ರತೀತಿ)

ಸಿದ್ಧಿಧಾತ್ರಿ

 ಸರ್ವಬಾಧಾಪ್ರಶಮನಂ ತ್ರೈಲೋಕಸ್ಯಾಖಿಲೇಶ್ವರಿ|

ಏವಮೇವ ತ್ವಯಾ ಕಾರ್ಯಮಸ್ಮದ್ವೈರಿವಿನಾಶನಮ್||

ನವಗುರ್ಗೆಯರಲ್ಲಿ ಕೊನೆಯವಳು ಸಿದ್ಧಿಧಾತ್ರಿ. ಒಂಭತ್ತನೆಯ ದಿನ ಆರಾಧನೆಗೊಳ್ಳುವ ಆದಿಶಕ್ತಿಯ ದಿವ್ಯ ಸೌಮ್ಯ ಸ್ವರೂಪ.

ಸಿದ್ಧಿ ಎಂಬ ಶಬ್ದಕ್ಕೆ ದೇವೀಪುರಾಣದಲ್ಲಿ ಸಾಧನಾತ್ ಸಿದ್ಧಿರಿತ್ಯುಕ್ತಾ ಸಾಧಿಕಾ ವಾಥ ಈಶ್ವರೀ ಎಂದು ನಿಷ್ಪತ್ತಿಯನ್ನು ಹೇಳಿದ್ದಾರೆ. ಮಾರ್ಕಂಡೇಯ ಪುರಾಣದಲ್ಲಿ ಎಂಟು ಸಿದ್ಧಿಗಳ ಉಲ್ಲೇಖ ಇದೆ. ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ ಪ್ರಾಕಾಮ್ಯ, ಈಶಿತ್ವ ವಶಿತ್ವ. ಇವು ಅಷ್ಟಸಿದ್ಧಿಗಳು. ಬ್ರಹ್ಮವೈವರ್ತಪುರಾಣದ ಪ್ರಕಾರ ಹದಿನೆಂಟು ಸಿದ್ಧಿಗಳಿವೆ. ಈ ಎಲ್ಲ ಸಿದ್ಧಿಗಳನ್ನು ಹೊಂದಿರುವವಳು ಹಾಗೂ ಸಾಧಕರಿಗೆ ದಯಪಾಲಿಸುವವಳು ಸಿದ್ಧಿಧಾತ್ರಿ.

ಸಿದ್ಧಿಧಾತ್ರಿಯನ್ನು ಸ್ತುತಿಸುವ ಶ್ಲೋಕ ಹೀಗಿದೆ:

ಸಿದ್ಧಗಂಧರ್ವಯಕ್ಷಾದ್ಯೈರಸುರೈರಮರೈರಪಿ|

ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ||

ಸಿದ್ಧರಿಂದ, ಗಂಧರ್ವರಿಂದ, ಯಕ್ಷರಿಂದ, ಎಲ್ಲ ದೇವತೆಗಳು ಹಾಗೂ ಅಸುರರಿಂದ ಪೂಜೆಯನ್ನು ಕೊಂಬವಳು ಈ ದೇವಿ. ಅವಳ ಹೆಸರೇ ಹೇಳುವಂತೆ ಸಕಲಸಿದ್ಧಿಗಳನ್ನೂ ದಯಪಾಲಿಸುವ ಜಗದಂಬಿಕೆ ಅವಳು.

ಸಿದ್ಧಿಧಾತ್ರಿದೇವಿಯು ತನ್ನ ನಾಲ್ಕು ಕರಗಳಲ್ಲಿ ಶಂಖ, ಚಕ್ರ, ಗದಾ ಪದ್ಮಗಳನ್ನು ಧರಿಸಿದ್ದಾಳೆ. ಕಮಲದ ಹೂವಿನ ಮೇಲೆ ವಿರಾಜಮಾನಳಾಗಿದ್ದಾಳೆ. ಸೌಮ್ಯಸ್ವರೂಪಳಾಗಿದ್ದಾಳೆ. ಅವಳನ್ನು ಭಕ್ತಿಯಿಂದ ಆರಾಧಿಸಿ ಲೌಕಿಕ ಹಾಗೂ ಪಾರಲೌಕಿಕ ಸಿದ್ಧಿಗಳನ್ನು ಪಡೆದುಕೊಂಡು ಕೃತಾರ್ಥರಾಗೋಣ.

ಮಿತ್ರರೇ, ಆಶ್ವೀನ ಮಾಸದ ಶುಕ್ಲಪ್ರತಿಪದೆಯಿಂದ ನವಮಿಯವರೆಗೆ ಪೂಜೆಯನ್ನು ಸ್ವೀಕರಿಸುವ ಜಗನ್ಮಾತೆಯ ವಿವಿಧರೂಪಗಳ ಅನುಸಂಧಾನವನ್ನು ನಾವು ಒಂಭತ್ತು ದಿನಗಳ ಕಾಲ ಮಾಡುತ್ತ ಬಂದಿದ್ದೇವೆ. ಮಹಾಮಾತೆ ಸೌಮ್ಯಸ್ವರೂಪಳೂ ಹೌದು ಉಗ್ರರೂಪಳೂ ಹೌದು. ಸೃಷ್ಟಿಯ ವಿನಾಶಕ್ಕೆ ಹವಣಿಸುವ ಸ್ವಾರ್ಥಪರರಾದ ದುಷ್ಟರ ಪಾಲಿಗೆ ಅವಳು ಭಯಂಕರಿ. ಭಕ್ತಿಯಿಂದ ಭಜಿಸುವ ಸಾತ್ತ್ವಿಕ ಭಕ್ತರಿಗೆ ಅವಳು ಶುಭಕರಿ. ಮೂಲಾಧಾರ ಚಕ್ರದಿಂದ ಸಹಸ್ರಾರ ಚಕ್ರದವರೆಗೂ ಸಂಚರಿಸುತ್ತ ಯೋಗಮಾರ್ಗಸಾಧಕರಿಗೆ ಸಿದ್ಧಿಯನ್ನು ಈಯುವ ಯೋಗೇಶ್ವರಿ. ಸತ್ತ್ವ ರಜಸ್ತಮೋಗುಣಗಳ ಅಧಿಷ್ಠಾತ್ರಿಯಾಗಿ ಸೃಷ್ಟಿಸ್ಥಿತಿಲಯಗಳನ್ನು ತನ್ನಿಚ್ಛೆಯಂತೆ ನಡೆಸುವ ಸರ್ವೇಶ್ವರಿ ಅವಳು. ಅವಳ ಸ್ವರೂಪಾನುಸಂಧಾನ ಹಾಗೂ ಭಕ್ತಿಯ ಆರಾಧನೆ ನಮ್ಮ ಬಾಳಿನಲ್ಲೂ ಉತ್ಕರ್ಷಕ್ಕೆ ಕಾರಣವಾಗುವುದರಲ್ಲಿ ಸಂದೇಹವಿಲ್ಲ,

ಒಂಭತ್ತು ದಿನಗಳ ಕಾಲ ಪೂಜೆಗೊಂಡ ದೇವಿಯ ವಿಸರ್ಜನೆ ಹತ್ತನೆಯ ದಿನ ನಡೆಯುತ್ತದೆ, ಹತ್ತನೆಯ ದಿನಕ್ಕೆ ವಿಜಯದಶಮಿ ಎಂದು ಹೆಸರು. ಮಹಿಷಾಸುರಮರ್ದಿನಿ ಮಹಿಷನನ್ನು ವಧಿಸಿ ವಿಜಯವನ್ನು ಸಾಧಿಸಿದ ದಿನವದು. ಶ್ರೀರಾಮ ರಾವಣನನ್ನು ಕೊಂದು ಲೋಕಕಲ್ಯಾಣವನ್ನು ಮಾಡಿದ ದಿನವೂ ಹೌದು. ಪಾಂಡವರು ಅಜ್ಞಾತವಾಸ ಮುಗಿಸಿ ಪ್ರಕಟವಾದದ್ದೂ ಇದೇ ದಿನ. ಶುಭಕಾರ್ಯಗಳಿಗೂ ವಿದ್ಯಾರಂಭಕ್ಕೂಅತ್ಯಂತ ಪ್ರಶಸ್ತವಾದ ದಿನವಿದು. ದಶಹರಾ ಅಥವಾ ದಸರಾ ಎಂದು ಪ್ರಸಿದ್ಧವಾಗಿರುವ ಈ ಪರ್ವಕಾಲದಲ್ಲಿ ಬನ್ನಿ ವಿನಿಮಯದ ಮೂಲಕ ಶುಭಾಶಯ ಹೇಳುವ ಸಂಪ್ರದಾಯವಿದೆ.

ಒಂಬತ್ತು ದಿನಗಳ ಕಾಲ ಈ ಜ್ಞಾನಸತ್ರವನ್ನು ಆಯೋಜಿಸಿ ಪ್ರಪಂಚದ ತುಂಬೆಲ್ಲ ಪ್ರಸಾರ ಮಾಡಿದ ಕೆ ಎಲ್ ಇ ಧ್ವನಿ ಸಮುದಾಯ ಬಾನುಲಿ ಕೇಂದ್ರ ಹಾಗೂ ರೇಡಿಯೋ ಮಿರ್ಚಿ ಅಂತರ್ಜಾಲ ಬಾನುಲಿ ಕೇಂದ್ರಗಳ ಕಾರ್ಯ ಅತ್ಯಂತ ಶ್ಲಾಘನೀಯ ಇಂತಹ ಅವಕಾಶವನ್ನು ನನಗೆ ಒದಗಿಸಿ ಕೊಟ್ಟಿದ್ದಕ್ಕೆ ನಾನು ಅವರಿಗೆ ಕೃತಜ್ಞ. ಒಂಬತ್ತು ದಿನಗಳ ಕಾಲ ದೇವಿಯ ಮಹಿಮೆಯ ಶ್ರವಣವನ್ನು ಮಾಡಿ ಮನನ ಮಾಡುವ ಮೂಲಕ ಈ ಸತ್ರದಲ್ಲಿ ಪಾಲ್ಗೊಂಡ ತಮಗೆಲ್ಲ ಜಗನ್ಮಾತೆಯ ಸಂಪೂರ್ಣ ಅನುಗ್ರಹವಾಗಲಿ ಎಂದು ಆಶಿಸುತ್ತ, ನಾಹಂ ಕರ್ತಾ ಕಾರಯಸಿ ತ್ವಂ ಎಂಬ ವಿನಮ್ರ ಭಾವದಿಂದ ಸೊನ್ನೆಯಾದ ನನ್ನಿಂದ ಸನ್ನೆಯಾಗಿ ಈ ಕಾರ್ಯವನ್ನು ಮಾಡಿಸಿದ ಜಗನ್ಮಾತೆಯ ಚರಣಕಮಲಗಳಲ್ಲಿ ಸರ್ವವನ್ನೂ ಅರ್ಪಿಸಿ ವಿರಮಿಸುತ್ತೇನೆ.

ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...