ಎದ್ದು ಬಾ ಧೀರತೆಯ ಸಂನ್ಯಾಸಿ ಎನ್ನೊಳಗೆ
ಚಿಮ್ಮಿ ಬಾ ಚೈತನ್ಯ ಚಿಲುಮೆಯಾಗಿ
ಕಷ್ಟದಲು ಬತ್ತದೆ ಸಿಹಿನೀರ ಉಕ್ಕಿಸುವ
ಎನ್ನೆದೆಯ ಉತ್ಸಾಹ ಬುಗ್ಗೆಯಾಗಿ
ಚಿಮ್ಮಿ ಬಾ ಚೈತನ್ಯ ಚಿಲುಮೆಯಾಗಿ
ಕಷ್ಟದಲು ಬತ್ತದೆ ಸಿಹಿನೀರ ಉಕ್ಕಿಸುವ
ಎನ್ನೆದೆಯ ಉತ್ಸಾಹ ಬುಗ್ಗೆಯಾಗಿ
ಎದ್ದು ಬಾ ಧೀರತೆಯ ಸಂನ್ಯಾಸಿ ಎನ್ನೊಳಗೆ
ಹೊಮ್ಮಿ ಬಾ ವಿವೇಕ ಜಲಧಿಯಾಗಿ
ಒಳಿತು ಕೆಡುಕುಗಳ ಭೇದದರಿವನು ಕೊಟ್ಟು
ಸತ್ಪಥದಿ ಕೊಂಡೊಯ್ವ ಹಂಸನಾಗಿ
ಹೊಮ್ಮಿ ಬಾ ವಿವೇಕ ಜಲಧಿಯಾಗಿ
ಒಳಿತು ಕೆಡುಕುಗಳ ಭೇದದರಿವನು ಕೊಟ್ಟು
ಸತ್ಪಥದಿ ಕೊಂಡೊಯ್ವ ಹಂಸನಾಗಿ
ಎದ್ದು ಬಾ ಧೀರತೆಯ ಸಂನ್ಯಾಸಿ ಎನ್ನೊಳಗೆ
ಮೂಡಿ ಬಾ ಆನಂದ ಲಹರಿಯಾಗಿ
ಭವದ ದು:ಖವನಳಿಸಿ ಅಮರ ಸಂತಸವೀವ
ಎನ್ನೊಳಿರುವ ಪರಮಾತ್ಮ ಜ್ಯೋತಿಯಾಗಿ
ಮೂಡಿ ಬಾ ಆನಂದ ಲಹರಿಯಾಗಿ
ಭವದ ದು:ಖವನಳಿಸಿ ಅಮರ ಸಂತಸವೀವ
ಎನ್ನೊಳಿರುವ ಪರಮಾತ್ಮ ಜ್ಯೋತಿಯಾಗಿ
ಎದ್ದು ಬಾ ಧೀರತೆಯ ಸಂನ್ಯಾಸಿ ಎನ್ನೊಳಗೆ
ಬೆಳೆದು ಬಾ ಸುಜ್ಞಾನಮೇರುವಾಗಿ
ಎನ್ನೊಳಗೆ ನಿನ್ನಿರವ ಅರಿಯಗೊಡದಧ್ಯಾಸ
ತೊಡೆದು ಹಾಕುವ ಜ್ಞಾನಸೂರ್ಯನಾಗಿ
ಬೆಳೆದು ಬಾ ಸುಜ್ಞಾನಮೇರುವಾಗಿ
ಎನ್ನೊಳಗೆ ನಿನ್ನಿರವ ಅರಿಯಗೊಡದಧ್ಯಾಸ
ತೊಡೆದು ಹಾಕುವ ಜ್ಞಾನಸೂರ್ಯನಾಗಿ
-ಮಹಾಬಲ ಭಟ್, ಗೋವಾ