Tuesday, March 13, 2018

ಸಂಚಿಕೆ 12 *ಪಾರಸವಿ*

ಮಹಿಳಾ ದಿನಾಚರಣೆಗೆ ವಿಶಿಷ್ಟ ಲೇಖನ ಸರಣಿ

*ಸನಾತನ ಭಾರತದ ಸ್ತ್ರೀರತ್ನಗಳು*
ದ್ವಿತೀಯ ಅವತರಣಿಕೆ

ಸಂಚಿಕೆ 12

*ಪಾರಸವಿ*

ವಿದುರನ ಪಾಲಿಗೆ ಅಪಾರಸವಿಯಾದ ಪಾರಸವಿ ಕೃಷ್ಣನ ಮುಗ್ಧ ಭಕ್ತೆಯರಲ್ಲಿ ಒಬ್ಬಳು. ದಾಸಿಯ ಮಗನಾಗಿ ಹುಟ್ಟಿದರೂ ಮಹಾಜ್ಞಾನಿಯಾಗಿ ಬೆಳೆದ ವಿದುರನಿಗೆ ತಕ್ಕ ಪತ್ನಿಯಾಗಿದ್ದಳು. ಕೃಷ್ಣ ಸಂಧಾನಕ್ಕಾಗಿ ಹಸ್ತಿನಾವತಿಗೆ ಬಂದಾಗ ವಿದುರನ ಮನೆಗೇ ಊಟಕ್ಕೆ ಹೋಗಿದ್ದ. ಹಸ್ತಿನಾವತಿಯ ಮಂತ್ರಿಯಾಗಿದ್ದರೂ ವಿದುರನ ಮನೆಯಲ್ಲಿ ಕಡು ಬಡತನ. ಕೃಷ್ಣನಿಗೆ ಆತಿಥ್ಯ ನೀಡುವ ಆಸೆಯಿದ್ದರೂ ಭೀಷ್ಮಾದಿಗಳನ್ನು ಬಿಟ್ಟು ತಮ್ಮ ಮನೆಗೆ ಕೃಷ್ಣ ಬರುವನೆಂಬ ನಿರೀಕ್ಷೆ ಇರಲಿಲ್ಲ. ಅನಿರೀಕ್ಷಿತವಾಗಿ ಬಂದ ಅವನನ್ನು ಸ್ವಾಗತಿಸುವುದರಲ್ಲಿ ದಂಪತಿಗಳಿಬ್ಬರೂ ಮೈಮರೆತರು. ಹಸಿವೆಯೆಂದ ಕೃಷ್ಣನಿಗೆ ಪಾರಸವಿ ಮನೆಯಲ್ಲಿದ್ದ ಒಂದು ಗುಟುಕು ಹಾಲನ್ನು ತಂದು ಕೊಟ್ಟಳು. ಹಾಲನ್ನು ಕದ್ದು ಕುಡಿದ ಕೈಯಿಂದ ಹೊಳೆಯನ್ನೂ ಹರಿಸಬಲ್ಲೆ ಎಂದು ತೋರಿಸಲೋ ಎಂಬಂತೆ ಕೃಷ್ಣ ಹಾಲಿನ ಹೊಳೆಯನ್ನೇ ಹರಿಸಿದ. ಪಾರಸವಿ ಪರವಶತೆಯಲ್ಲಿ ಬಾಳೆಹಣ್ಣಿನ ಸಿಪ್ಪೆಯನ್ನು ಸುಲಿದು ಹಣ್ಣನ್ನು ಕೊಡುವ ಬದಲು ಸಿಪ್ಪೆಯನ್ನು ಕೊಟ್ಟಳು. ಕೃಷ್ಣನಾದರೋ ಯಶೋದೆಯ ಕೈತುತ್ತಿನ ನಂತರ ಈಗ ಮತ್ತೊಮ್ಮೆ ಸವಿಯಾದ ಊಟ ಮಾಡುತ್ತಿದ್ದೇನೆ ಎನ್ನುತ್ತ ಅದನ್ನೇ ಸವಿದ. ವಿದುರ ಬಂದು ಪತ್ನಿಯನ್ನು ಎಚ್ಚರಿಸಿದ. ’ನೀನು ಬರುವವರೆಗೆ ಬಾಳೆಯ ಹಣ್ಣನ್ನೇ ತಿಂತಿದ್ದೆ. ಈಗ ಸಿಪ್ಪೆಯನ್ನು ತಿನ್ನುವಂತಾಯ್ತು’ ಎಂದು ವಿದುರನೆಡೆಗೆ ನಕ್ಕು ಪಾರಸವಿಯ ಮುಗ್ಧಭಕ್ತಿಗೆ ಮೆಚ್ಚಿದ ಕೃಷ್ಣ ಅವಳನ್ನು ಅನುಗ್ರಹಿಸಿದ. ಪಾರಸವಿಯ ಪಾತ್ರ ಮಹಾಭಾರತದಲ್ಲಿ ಸಣ್ಣದೇ ಆದರೂ ಗುರುತಿಸಬೇಕಾದ್ದು.

✍🏻 *ಮಹಾಬಲ ಭಟ್, ಗೋವಾ*
ಸಂಪರ್ಕ: ೯೮೬೦೦೬೦೩೭೩

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...