Wednesday, March 7, 2018

ಸಂಚಿಕೆ 7 *ಶ್ರುತಾವತೀ*

ಮಹಿಳಾ ದಿನಾಚರಣೆಗೆ ವಿಶಿಷ್ಟ ಲೇಖನ ಸರಣಿ

*ಸನಾತನ ಭಾರತದ ಸ್ತ್ರೀರತ್ನಗಳು*
ದ್ವಿತೀಯ ಅವತರಣಿಕೆ

ಸಂಚಿಕೆ 7

*ಶ್ರುತಾವತೀ*

ಮಹರ್ಷಿ ಭರದ್ವಾಜನ ಮಗಳು ಶ್ರುತಾವತಿ ಪರಮಸುಂದರಿಯೂ ವಿದ್ಯಾಸಂಪನ್ನೆಯೂ ಆಗಿದ್ದಳು. ಅವಳ ತಪೋನಿಷ್ಠೆಯೂ ಅಗಾಧವಾಗಿತ್ತು. ಇಂದ್ರನನ್ನೇ ಪತಿಯನ್ನಾಗಿ ಪಡೆಯಬೇಕು ಎಂಬುದು ಅವಳ ಮಹದಿಚ್ಛೆಯಾಗಿತ್ತು. ಅದಕ್ಕಾಗಿ ಉಗ್ರ ತಪಸ್ಸನ್ನು ಆರಂಭಿಸಿದಳು. ಅವಳನ್ನು ಪರೀಕ್ಷಿಸುವುದಕ್ಕಾಗಿ ಇಂದ್ರನು ಮಹರ್ಷಿ ವಸಿಷ್ಠರ ರೂಪದಲ್ಲಿ ಅವಳ ಆಶ್ರಮಕ್ಕಾಗಮಿಸಿದ. ತಪೋಧನರಾದ ವಸಿಷ್ಠರನ್ನು ಕಂಡು ಅವರನ್ನು ಸ್ವಾಗತಿಸಿ ಉಪಚರಿಸಿದಳು. ಅವರು ಅವಳಿಗೆ ಐದು ಬದರೀ ಕಾಯಿಗಳನ್ನು ನೀಡಿ ಅದರಿಂದ ಅಡುಗೆ ಮಾಡಬೇಕೆಂದೂ, ಅವರು ಸರೋವರಕ್ಕೆ ಹೋಗಿ ಆಹ್ನಿಕವನ್ನು ಪೂರೈಸಿ ಬರುವುದಾಗಿಯೂ ತಿಳಿಸಿದರು.

ಶ್ರುತಾವತಿಯಲ್ಲಿರುವ ಕಟ್ಟಿಗೆಯ ಸಂಗ್ರಹಗಳೆಲ್ಲ ಮುಗಿದರೂ ಕಾಯಿಗಳು ಬೇಯಲಿಲ್ಲ. ವಸಿಷ್ಠರು ಆಗಮಿಸುವ ಸಮಯವಾಗುತ್ತಲಿತ್ತು. ಏನು ಮಾಡುವುದೆಂದು ತಿಳಿಯದೆ ತನ್ನ ಕಾಲುಗಳನ್ನೇ ಒಲೆಯಲ್ಲಿ ಸೇರಿಸಿದಳು. ಕಾಲುಗಳು ಸುಡುತ್ತಿದ್ದರೂ ಧ್ಯೇಯಸಾಧನೆಯೇ ಅವಳ ಗುರಿಯಾಗಿತ್ತು. ಅಷ್ಟರಲ್ಲಿ ಅಲ್ಲಿಗೆ ಆಗಮಿಸಿದ ವಸಿಷ್ಥರ ರೂಪದ ಇಂದ್ರ ಅವಳನ್ನು ಎಬ್ಬಿಸಿ ಅನುಗ್ರಹಿಸಿದ.

ಹಿಮಾಲಯದಲ್ಲಿನ ಶ್ರುತಾವತಿಯ ಆಶ್ರಮ ಪರಿಸರ ಬದರಾಪಚನತೀರ್ಥ ಎಂದು ಪ್ರಸಿದ್ಧವಾಗಿದೆ ಎಂದು ಮಹಾಭಾರತದಲ್ಲಿ ಉಲ್ಲೇಖವಾಗಿದೆ. 

✍🏻 *ಮಹಾಬಲ ಭಟ್, ಗೋವಾ*
ಸಂಪರ್ಕ: ೯೮೬೦೦೬೦೩೭೩

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...