Saturday, January 13, 2018

ಮತ್ತೆ ಹುಟ್ಟಿ ಬಾರೆಯಾ?


ಎಲ್ಲಿ ಹೋದೆ ಸ್ವಾಮಿ ನೀನು
ಮತ್ತೆ ಹುಟ್ಟಿ ಬಾರೆಯಾ?
ಜಗವು ನಿನ್ನ ಮಾತ ಮರೆತು
ಮೆರೆಯುತಿಹುದು ಕಾಣೆಯಾ?

ಅಂದು ನೀನು ಎತ್ತಿ ಹಿಡಿದ
ಧರ್ಮವಿಂದು ಬಳಲಿದೆ |
ನಾಯಿನರಿಗಳಬ್ಬರದಲಿ
ಸಿಂಹನಾದ ಅಡಗಿದೆ ||

ಯುವಕರಲ್ಲಿ ಸ್ವಾಭಿಮಾನ
ದೇಶಭಕ್ತಿ ತುಂಬಿದೆ |
ನಿರಭಿಮಾನಿ ತರುಣರಿಂದ
ದೇಶವಿಂದು ನಲುಗಿದೆ||

ನಿನ್ನ ತುಡಿತ ತುಂಬಿಕೊಂಡ
ಜನರ ರಕ್ತ ಹರಿದಿದೆ ||
ರಾಜಕೀಯದಾಟದಲ್ಲಿ
ತರುಣಜನತೆ ಸಿಲುಕಿದೆ ||

ಒಬ್ಬ ಬಂದರಾಗದಿಂದು
ಉದಿಸು ಎಲ್ಲರೆದೆಯಲಿ |
ಆನಂದಝರಿಯ ವಿವೇಕ ಬುಗ್ಗೆಯು ಚಿಮ್ಮಲೆಮ್ಮಯ ಮನಸಲಿ ||

✍🏻 *ಮಹಾಬಲ ಭಟ್, ಗೋವಾ*

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...