Wednesday, August 9, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೯ *ರಾಭಣೋ ನ ತು ರಾವಣ:*

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೯

*ರಾಭಣೋ ನ ತು ರಾವಣ:*

ಬಹುಮಾನದ ಆಶೆಯಿಂದ ಭೋಜರಾಜನ ಆಸ್ಥಾನಕ್ಕೆ ಬರುವ ಅರ್ಧಪಂಡಿತರಿಗೇನೂ ಕಡಿಮೆಯಿರಲಿಲ್ಲ. ಹಾಗೇ ಒಂದಿನ ಚೂರು ಪಾರು ಓದಿಕೊಂಡ ಬ್ರಾಹ್ಮಣನೊಬ್ಬ ಸಭೆಗೆ ಬಂದ. ಬಂದವನೇ ರಾಮಾಯಣದ ಶ್ಲೋಕವೊಂದನ್ನು ಉಚ್ಚರಿಸಿದ. ಆದರೆ ರಾವಣ ಎಂಬ ಶಬ್ದವನ್ನು ’ರಾಭಣ’ ಎಂದು ಉಚ್ಚರಿಸಿದ. ಅಪಶಬ್ದವನ್ನು ಕೇಳಿ ಭೋಜರಾಜ ಅವನತ್ತ ಗಂಭೀರವದನನಾಗಿ ನೋಡುತ್ತ ’ಯಾಕೆ ಹೀಗೆ?’ ಎಂದು ಪ್ರಶ್ನಿಸಿದ. ಆ ಬ್ರಾಹ್ಮಣ ತನ್ನ ಉಚ್ಚಾರಣೆಯನ್ನು ಸಮರ್ಥಿಸಿಕೊಳ್ಳಲಾಗದೆ ತಡವರಿಸಿದ. ಅವನ ಸ್ಥಿತಿ ನೋಡಿ ಕಾಳಿದಾಸ ಕನಿಕರದಿಂದ ಅವನ ಸಹಾಯಕ್ಕೆ ಧಾವಿಸಿದ.

ಕುಂಭಕರ್ಣೇ ಭಕಾರೋಽಸ್ತಿ
ಭಕಾರೋಸ್ತಿ ವಿಭೀಷಣೇ |
ತಯೋರ್ಜ್ಯೇಷ್ಠೇ ಕುಲಶ್ರೇಷ್ಠೇ
ಭಕಾರ: ಕಿಂ ನ ವಿದ್ಯತೇ? ||

’ಕುಂಭಕರ್ಣ ಎಂಬ ಹೆಸರಿನಲ್ಲಿ ಭಕಾರವಿದೆ. ’ವಿಭೀಷಣ’ ನಲ್ಲೂ ಭಕಾರವಿದೆ. ಅವರಿಗಿಂತ ಹಿರಿಯನಾದ ಅವರ ಕುಲದಲ್ಲೇ ಶ್ರೇಷ್ಠನಾದ ರಾವಣನ ಹೆಸರಿನಲ್ಲೇಕೆ ಭಕಾರವಿಲ್ಲ? ಇದು ಸರಿಯಲ್ಲ ಹಾಗಾಗಿ ’ರಾಭಣೋ ನ ತು ರಾವಣ:’ ರಾಭಣ ಎನ್ನುವುದೇ ಸರಿ ರಾವಣ ಅಲ್ಲ.

ಕಾಳಿದಾಸನ ಸಮಯಸ್ಫೂರ್ತಿಗೆ ತಲೆದೂಗಿದ ಭೋಜರಾಜ ಆ ಬ್ರಾಹ್ಮಣನಿಗೆ ಯಥೇಷ್ಟ ಧನಕನಕಾದಿಗಳನ್ನು ಕೊಟ್ಟು ಕಳುಹಿದ.

ತಪ್ಪನ್ನು ಸಮರ್ಥಿಸಿಕೊಳ್ಳಲೂ ಪ್ರತಿಭೆ ಬೇಕು ಅಲ್ಲವೆ?

📝 *ಮಹಾಬಲ ಭಟ್, ಗೋವಾ*

#ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...