Friday, August 11, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೧೧ *ಸಹಸ್ರಶೀರ್ಷಾ ಪುರುಷ:*

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೧೧

*ಸಹಸ್ರಶೀರ್ಷಾ ಪುರುಷ:*

ಇದು ಮತ್ತೊಬ್ಬ ಪಂಡಿತಪುತ್ರನ ಕಥೆ. ಧನಾಶೆಯಿಂದ ಭೋಜರಾಜನ ಆಸ್ಥಾನವನ್ನು ಪ್ರವೇಶಿದ ಅವನಿಗೆ ಏನು ಹೇಳಬೇಕೆಂದೇ ತೋರಲಿಲ್ಲ. ತಕ್ಷಣ ನೆನಪಿಗೆ ಬಂದ ಪುರುಷಸೂಕ್ತದ ಮೊದಲ ಸಾಲನ್ನು ಗಟ್ಟಿಯಾಗಿ ಹೇಳಿದ – ’ಸಹಸ್ರಶೀರ್ಷಾ ಪುರುಷ: ಸಹಸ್ರಾಕ್ಷ: ಸಹಸ್ರಪಾತ್’. ಮುಂದೇನು ಹೇಳುತ್ತಾನೆಂದು ಸಭಿಕರೆಲ್ಲ ಕಾಯುತ್ತ ಕುಳಿತರು. ಆದರೆ ಬ್ರಾಹ್ಮಣನ ಮುಖದಿಂದ ಮಾತೇ ಹೊರಡಲಿಲ್ಲ. ತಕ್ಷಣ ಕಾಳಿದಾಸ ಅವನ ಸಹಾಯಕ್ಕೆ ಧಾವಿಸಿದ. ’ಮಹಾರಾಜ! ಮೊದಲ ಬಾರಿಗೆ ಈ ಭವ್ಯ ಸಭೆಯನ್ನು ಪ್ರವೇಶಿಸಿದ ಇವನಿಗೆ ಗಾಬರಿಯಾಗಿ ಮಾತು ಹೊರಡುತ್ತಿಲ್ಲ. ಈ ಪದ್ಯದ ದ್ವಿತೀಯಾರ್ಧವನ್ನು ಅವನು ಮೊದಲೇ ನನಗೆ ಹೇಳಿದ್ದಾನೆ. ಪೂರ್ಣ ಶ್ಲೋಕ ಹೀಗಿದೆ-

ಸಹಸ್ರಶೀರ್ಷಾ ಪುರುಷ:
ಸಹಸ್ರಾಕ್ಷ: ಸಹಸ್ರಪಾತ್ |
ಚಲಿತಶ್ಚಕಿತಶ್ಛನ್ನ:
ತವ ಸೈನ್ಯೇ ಪ್ರಧಾವತಿ ||

(ನಿನ್ನ ಸೈನ್ಯ ಧಾವಿಸಿದಾಗ ಸ್ಥಿರತೆಗೆ ಹೆಸರಾದ ಸಹಸ್ರಶೀರ್ಷಾ ಪುರುಷ: ಎಂದರೆ ಸಾವಿರ ಹೆಡೆಗಳುಳ್ಳ ಶೇಷನೂ ಚಲಿತಃ ಅಂದರೆ ಕದಲಿದ. ಸಹಸ್ರಾಕ್ಷ ಎಂದರೆ ದೇವೇಂದ್ರ ಚಕಿತನಾದ. ಎದ್ದ ಧೂಳಿನಿಂದಾಗಿ ಸಹಸ್ರಪಾಣಿಯಾದ ಸೂರ್ಯನು ಛನ್ನಃ ಅಂದರೆ ಮುಚ್ಚಿಹೋಗಿದ್ದಾನೆ.)

ಭೋಜರಾಜ ಕಾಳಿದಾಸನೆಡೆಗೆ ಮೆಚ್ಚುಗೆಯ ಕಟಾಕ್ಷಬೀರಿ ಆ ಬ್ರಾಹ್ಮಣನ ಬಡತನ ನೀಗಿಸಿದ.

📝 *ಮಹಾಬಲ ಭಟ್, ಗೋವಾ*

#  ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...