Thursday, August 31, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೩೦ *ವಿಕಟನಿತಂಬೆ*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೩೦

*ವಿಕಟನಿತಂಬೆ*

ಕಾಶ್ಮೀರದ ಪಂಡಿತಪರಂಪರೆಯಲ್ಲಿ ವಿಕಟನಿತಂಬಾ ಎಂಬ ಕವಯಿತ್ರಿಯೊಬ್ಬಳು ಆಗಿಹೋದಳು. ತರ್ಕ-ವ್ಯಾಕರಣ-ಸಾಹಿತ್ಯಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ಅವಳಿಗೆ ಗಂಡನಾಗಿ ಸಿಕ್ಕವ ಮಾತ್ರ ನಿರಕ್ಷರಕುಕ್ಷಿಯಾಗಿದ್ದ. ಅವಳ ಪರಿಸ್ಥಿತಿಯನ್ನು ನೋಡಿ ಅವಳ ಸಖಿಯೊಬ್ಬಳು ವರ್ಣಿಸಿದ ಕ್ರೂರ ವಿಡಂಬನೆ ಹೀಗಿದೆ:

ಕಾಲೇ ಮಾಷಂ ಸಸ್ಯೇ ಮಾಸಂ
ವದತಿ ಸಕಾಶಂ ಯಶ್ಚ ಶಕಾಸಂ |
ಉಷ್ಟ್ರೇ ಲುಂಪತಿ ಶಂ ವಾ ರಂ ವಾ
ತಸ್ಮೈ ದತ್ತಾ ವಿಕಟನಿತಂಬಾ ||

ಕಾಲಕ್ಕೆ ಸಂಬಂಧಿಸಿದ ಪದವನ್ನು ಹೇಳುವಾಗ ಮಾಷ ಎನ್ನುವುದು (ಮಾಸ ಎಂದು ಹೇಳಲು), ಸಸ್ಯಕ್ಕೆ ಸಂಬಂಧಪಟ್ಟಾಗ ಮಾಸ ಎನ್ನುವುದು (ಮಾಷ=ಉದ್ದು ಎನ್ನಬೇಕಿತ್ತು), ಸಕಾಶ(ಸಮೀಪ) ಎನ್ನಲು ಶಕಾಸ ಎನ್ನುವುದು, ಉಷ್ಟ್ರ ಎಂದು ಹೇಳುವಾಗ ಒಂದೋ ಉಟ್ರ ಎನ್ನುವುದು ಇಲ್ಲವೇ ಉಷ್ಟ ಎಂದು ಹೇಳುವುದು ಇಂತಹ ಪುರುಷನಿಗೆ ವಿಕಟನಿತಂಬೆಯನ್ನು ಕೊಟ್ಟರು.

ಹಿಂದೆ ಹೆಣ್ಮಕ್ಕಳು ಶಿಕ್ಷಣದಲ್ಲಿ ಹಿಂದುಳಿದಿದ್ದರು ಎಂದು ಹೇಳಿದವರಾರು?

*ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...