ಮಹಿಳಾ
ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
“ಸನಾತನ ಭಾರತದ
ಸ್ತ್ರೀರತ್ನಗಳು”
ಭಾಗ – ೧೪
ವೀರಯೋಧೆ ಇಂದ್ರಸೇನೆ:
ಋಗ್ವೇದದ
೧೦ ನೆಯ ಮಂಡಲದ ೧೦ನೆಯ ಸೂಕ್ತದಲ್ಲಿ ಉಲ್ಲೇಖವಾಗಿರುವ ಇನ್ನೊಬ್ಬಳು ವೀರಯೋಧೆ ಇಂದ್ರಸೇನೆ.
ನಳಾಯನಿ ಹಾಗೂ ಮುದ್ಗಲಾನಿ ಎಂಬವು ಅವಳ ಇನ್ನೆರಡು ಹೆಸರುಗಳು. ವಿಖ್ಯಾತನಾದ ನಳಮಹಾರಾಜನ ಮಗಳು.
ಅಶ್ವಹೃದಯ ವಿದ್ಯೆಯನ್ನು ಬಲ್ಲವನಾದ ನಳನಿಂದ ಸಾರಥ್ಯವಿದ್ಯೆಯನ್ನು ಅರಗಿಸಿಕೊಂಡಿದ್ದಳು.
ಅಸ್ತ್ರ-ಶಸ್ತ್ರಗಳ ವಿದ್ಯೆಯಲ್ಲಿ ನಿಷ್ಣಾತಳಾಗಿದ್ದಳು. ಅವಳನ್ನು ಭರ್ಮ್ಯಶ್ವ ಭೂಪಾಲನ ಮಗನಾದ
ಮುದ್ಗಲನಿಗೆ ಮದುವೆ ಮಾಡಿಕೊಡಲಾಗಿತ್ತು. ಅಪಾರ ಗೋ ಸಂಪತ್ತಿನ ಒಡೆಯನಾದ ಮದ್ಗಲನ ಗೋವುಗಳನ್ನು
ಒಮ್ಮೆ ಕಳ್ಳರು ಅಪಹರಿಸಿದರು. ಅವರನ್ನು ಹಿಡಿಯುವುದಕ್ಕಾಗಿ ಮುದ್ಗಲ ಹೊರಟ. ಇಂದ್ರಸೇನೆಯೇ ಅವನ
ಸಾರಥಿಯಾಗಿ ರಥವನ್ನು ನಡೆಸಿದಳು. ಕಳ್ಳರೊಡನೆ ಯುದ್ಧಮಾಡಬೇಕಾಗಿ ಬಂದಾಗ ಉತ್ತಮ ಸಾರಥ್ಯ
ನಿರ್ವಹಣೆ ಮಾಡಿದ್ದಲ್ಲದೆ ರಾಜನಿಗೆ ಉತ್ತಮ ಸೇನಾಪತಿಯಾಗಿ ಶೌರ್ಯದಿಂದ ಹೋರಾಡಿದಳು.
ಮಹಾಬಲ
ಭಟ್, ಗೋವಾ
No comments:
Post a Comment