Wednesday, March 8, 2017

ವಿಶ್ವವಾರಾ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
ಸನಾತನ ಭಾರತದ ಸ್ತ್ರೀರತ್ನಗಳು
ಭಾಗ - ೭

ವಿಶ್ವವಾರಾ
ವೈದಿಕ ಸೂಕ್ತಗಳನ್ನು ರಚಿಸಿದ ಋಷಿಕೆಗಳಲ್ಲಿ ವಿಶ್ವವಾರಾ ಒಬ್ಬಳು. ಅತ್ರಿವಂಶಜಳಾದ ಇವಳು ರಚಿಸಿದ ಸೂಕ್ತ (ಋಗ್ವೆದದ ೫ನೇ ಮಂಡಲದ ೨೮ನೇ ಸೂಕ್ತ) ಅಗ್ನಿಯ ಕುರಿತಾದದ್ದು. ಪೂರ್ವದಿಕ್ಕಿಗೆ ಮುಖ ಮಾಡಿ ಕುಳಿತ ವಿಶ್ವವಾರಾ ತನ್ನ ವೈವಾಹಿಕ ಜೀವನ ಯಶಸ್ವಿಯೂ ಆನಂದಮಯವೂ ಆಗಿರಲೆಂದು ಪ್ರಾರ್ಥಿಸುತ್ತ ಅಗ್ನಿಯ ಉಪಾಸನೆಯನ್ನು ಮಾಡುತ್ತಾಳೆ. ಉಳಿದೆಲ್ಲ ದೇವತೆಗಳ ಪ್ರಾಪ್ತಿ ಅಗ್ನಿಯ ಮೂಲಕವೇ ಆಗುವುದರಿಂದ ಅಗ್ನಿಯ ಉಪಾಸನೆ ಮಹತ್ತ್ವಪೂರ್ಣವಾದದ್ದೆಂದು ಅವಳ ಪ್ರತಿಪಾದನೆ. ಅಂದಿನ ಕಾಲದಲ್ಲಿ ಸ್ತ್ರೀಯರು ಸ್ವತ: ಹೋಮ ಹವನಾದಿಗಳನ್ನು ನಡೆಸುತ್ತಿದ್ದರು ಎಂಬುದಕ್ಕೆ ಈ ಸೂಕ್ತವೊಂದು ಸಾಕ್ಷಿ.


ಕಠೋಪನಿಷತ್ತಿನ ನಾಯಕ ನಚಿಕೇತನ ತಾಯಿ ಅಂದರೆ ಉದ್ದಾಲಕ(ವಾಜಶ್ರವಸ್) ಮಹರ್ಷಿಯ ಮಡದಿಯ ಹೆಸರೂ ವಿಶ್ವವಾರಾ ಎಂದಾಗಿತ್ತು. ಈ ಇಬ್ಬರೂ ಬೇರೆ ಬೇರೆಯೇ ಅಥವಾ ಒಬ್ಬರೇ ಎಂಬ ಬಗ್ಗೆ ಎಲ್ಲಿಯೂ ಉಲ್ಲೇಖ ಸಿಗಲಿಲ್ಲ. ಈ ವಿಶ್ವವಾರಾ ಕೂಡ ವಿದ್ಯಾವಂತ ಹಾಗೂ ಪ್ರಜ್ಞಾವಂತ ಮಹಿಳೆಯಾಗಿದ್ದಳು. ನಚಿಕೇತನಲ್ಲಿ ವಿನಯ, ಜಿಜ್ಞಾಸೆ, ತ್ಯಾಗ, ದಾನಶೀಲತೆಯ ಗುಣಗಳ ವಿಕಾಸದಲ್ಲಿ ಇವಳ ಪಾತ್ರ ಮಹತ್ತ್ವದ್ದು.

No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...