Monday, December 3, 2018

ಬಾದರಾಯಣಸಂಬಂಧ ನ್ಯಾಯ:


ಬಾದರಾಯಣ ವ್ಯಾಸರಿಗೆ ಸಂಬಂಧವಿಲ್ಲದ ನ್ಯಾಯವಿದು. ಈ ನ್ಯಾಯದ ಕುರಿತ ಒಂದು ಲೋಕಕಥೆ ಹೀಗಿದೆ.

ಚಕ್ಕಡಿ ಗಾಡಿಯಲ್ಲಿ ಪ್ರಯಾಣಿಸುವ ಕಾಲವದು. ಒಬ್ಬ ಯಾತ್ರಿಕ ಒಂದು ಹಳ್ಳಿಯಲ್ಲಿ ಪ್ರಯಾಣಿಸುತ್ತಿರುವಾಗ ಗಾಡಿ ಕೆಟ್ಟು ಹೋಯಿತು. ಹಸಿವೆಯಿಂದಲೂ ಬಳಲುತ್ತಿದ್ದ ಆ ಯಾತ್ರಿಕ ಅಲ್ಲಿಯೇ ಇದ್ದ ಮನೆಯನ್ನು ಹೊಕ್ಕ. ಅತ್ಯಂತ ಆತ್ಮೀಯ ಪರಿಚಿತರಂತೆ ಯಜಮಾನನೊಂದಿಗೆ ವ್ಯವಹರಿಸತೊಡಗಿದ. ಸದ್ಗೃಹಸ್ಥನಾದ ಯಜಮಾನನಾದರೋ ತಾವು ಯಾರೆಂದು ಕೇಳುವುದು ಸಭ್ಯತನವಲ್ಲವೆಂದು ತಿಳಿದು ಪತ್ನಿಯ ಕಡೆಯ ಸಂಬಂಧಿಯಿರಬೇಕೆಂದು ಬಗೆದು ಉಪಚರಿಸಿದ. ಪತ್ನಿಯಾದರೋ ಗಂಡನ ಸಂಬಂಧಿಯಿರಬೇಕೆಂದು ಉಪಚರಿಸಿದಳು. 

ಊಟವಾಯಿತು. ವೀಳ್ಯವನ್ನು ಸವಿಯುವಾಗ ಯಜಮಾನ ಕುತೂಹಲ ತಾಳಲಾರದೆ ಕೇಳಿಯೇ ಬಿಟ್ಟ. ನಮಗೂ ನಿಮಗೂ ಯಾವ ರೀತಿಯ ಸಂಬಂಧ?’. ಆ ಯಾತ್ರಿಕ ನಗುತ್ತ ಯಜಮಾನನ ಮನೆಯ ಅಂಗಳದ ತುದಿಯಲ್ಲಿದ್ದ ಬದರೀ(ಬೋರೆ) ಮರವನ್ನು ತೋರಿಸಿ ಹೇಳಿದ

ಅಸ್ಮಾಕಂ ಬದರೀಚಕ್ರಂ ಯುಷ್ಮಾಕಂ ಬದರೀತರುಃ |
ಬಾದರಾಯಣಸಂಬಂಧಾತ್ ಯೂಯಂ ಯೂಯಂ ವಯಂ ವಯಮ್ ||

ನಮ್ಮ ಗಾಡಿಯ ಚಕ್ರ ಬೋರೆ ಮರದಿಂದ ಮಾಡಿದ್ದು. ನಿಮ್ಮ ಮನೆಯ ಅಂಗಳದಲ್ಲಿ ಒಂದು ಬೋರೆ ಮರವಿದೆ. ಹಾಗಾಗಿ ಬಾದರಾಯಣ ಸಂಬಂಧದಿಂದ ನಾವು ನಾವು, ನೀವು ನೀವು.

ಅಷ್ಟರಲ್ಲಿ ಗಾಡಿ ರಿಪೇರಿಯಾಗಿತ್ತು. ಯಾತ್ರಿಕ ಹೊರಟೇ ಬಿಟ್ಟ.

ಇಂದಿಗೂ ಕಾರ್ಯಸಾಧನೆಗಾಗಿ ಏನೇನೋ ಸಂಬಂಧಗಳನ್ನು ಕಲ್ಪಿಸುವಾಗ ಈ ನ್ಯಾಯದ ಬಳಕೆಯಾಗುತ್ತದೆ.

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...