Sunday, March 26, 2017

ವೇದಕಾಲದ ಕೆಲವು ಋಷಿಕೆಯರು: (....ಮುಂದುವರಿದುದು)

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – ೨೬

ವೇದಕಾಲದ ಕೆಲವು ಋಷಿಕೆಯರು: (....ಮುಂದುವರಿದುದು)

ವೈವಸ್ವತೀ ಯಮೀ: ಸೂರ್ಯ ಮತ್ತು ಸರಣ್ಯೂ ದೇವಿಯರ ಮಕ್ಕಳು ಯಮ ಮತ್ತು ಯಮೀ. ಋಗ್ವೇದದ ೧೦ ನೆಯ ಮಂಡಲದ ಹತ್ತನೆಯ ಸೂಕ್ತ ಇವರ ಸಂವಾದವನ್ನು ಹೊಂದಿದೆ. ಇಲ್ಲಿ ಯಮೀ ತನ್ನ ಸೋದರನಾದ ಯಮನಿಂದಲೇ ತನ್ನ ಕಾಮವನ್ನು ಪೂರ್ತಿಗೊಳಿಸಿಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾಳೆ. ಆದರೆ ಯಮನು ಅದಕ್ಕೆ ಒಪ್ಪದೆ ಅಣ್ಣ ತಂಗಿಯರ ದೈಹಿಕ ಸಂಬಂಧ ಅಪ್ರಾಕೃತಿಕವಾದದ್ದು ಎಂದು ಪ್ರತಿಪಾದಿಸಿ ಅವಳನ್ನು ಸುಮ್ಮನಾಗಿಸುತ್ತಾನೆ. ಹತ್ತನೆಯ ಮಂಡಲದ ೧೫೪ ನೇ ಸೂಕ್ತದ ಋಷಿಕೆಯೂ ಈ ಯಮೀ.

ರಾತ್ರಿ: ಹತ್ತನೆಯ ಮಂಡಲದ ೧೨೭ ನೇ ಸೂಕ್ತ ೮ ಮಂತ್ರಗಳನ್ನು ಹೊಂದಿದ್ದು ರಾತ್ರಿಸೂಕ್ತವೆಂದು ಪ್ರಸಿದ್ಧವಾಗಿದೆ. ಇದರ ಋಷಿಕೆಯ ಹೆಸರೂ ರಾತ್ರಿ. ಅವಳು ಭರದ್ವಾಜ ಮುನಿಯ ಮಗಳಾಗಿದ್ದಳು.

ಸರಮಾ: ಇದು ದೇವಲೋಕದ ಹೆಣ್ಣು ನಾಯಿಯ ಹೆಸರು. ಹತ್ತನೆಯ ಮಂಡಲದ ೧೦೮ ನೇ ಸೂಕ್ತದಲ್ಲಿ ಈ ನಾಯಿಯ ವಿಕ್ರಮ ವರ್ಣಿತವಾಗಿದೆ. ಇವಳನ್ನೇ ಈ ಸೂಕ್ತದ ಋಷಿಕೆ ಎಂತಲೂ ಹೇಳಲಾಗಿದೆ.ಈ  ಸೂಕ್ತದಲ್ಲಿ ಬರುವ ಘಟನೆ ಕುತೂಹಲಕಾರಿಯಾಗಿದೆ. ಪತ್ತೇದಾರಿಕೆಗೆ ನಾಯಿಯನ್ನು ಬಳಸಿಕೊಳ್ಳುವ ವಿಧಾನ ಋಗ್ವೇದಕಾಲದಲ್ಲಿಯೇ ಇತ್ತು ಎಂದು ಈ ಸೂಕ್ತದಿಂದ ಕಂಡುಬರುತ್ತದೆ. ಆಂಗಿರಸರಿಗೆ ಸಂಬಂಧಿಸಿದ ಗೋವುಗಳನ್ನು ಫಣಿಗಳೆಂಬ ಕಳ್ಳರು ಅಪಹರಿಸಿ ಗುಹೆಯಲ್ಲಿ ಅಡಗಿಕೊಂಡಾಗ ಅವರು ಇಂದ್ರನಿಗೆ ಮೊರೆಯಿಡುತ್ತಾರೆ. ಇಂದ್ರ ಕಳ್ಳರನ್ನು ಕಂಡುಹಿಡಿಯಲು ಸುಪರ್ಣನೆಂಬ ಪಕ್ಷಿಯನ್ನು ಕಳಿಸುತ್ತಾನೆ. ಆದರೆ ಫಣಿಗಳ ಎಂಜಲು ಕಾಸಿಗೆ ಕೈಯ್ಯೊಡ್ಡಿದ ಸುಪರ್ಣ ಇಂದ್ರನಿಗೆ ವಿಶ್ವಾಸದ್ರೋಹವನ್ನು ಮಾಡುತ್ತಾನೆ. ನಂತರ ಇಂದ್ರ ಸರಮೆಗೆ ಈ ಕೆಲಸವನ್ನು ಒಪ್ಪಿಸಿದಾಗ ತನ್ನ ಮರಿಗಳಿಗೆ ಆ ಆಕಳ ಹಾಲನ್ನು ನೀಡಬೇಕೆಂದು ಕೇಳಿಕೊಳ್ಳುತ್ತಾಳೆ. ಬಹಳ ಚಾಕಚಕ್ಯತೆಯಿಂದ ಫಣಿಗಳ ಇರವನ್ನು ಸರಮೆ ಕಂಡು ಹಿಡಿಯುತ್ತಾಳೆ. ಫಣಿಗಳು ಅವಳನ್ನು ’ನೀನು ನಮ್ಮ ಸೋದರಿಯಾಗು. ಇಂದ್ರನನ್ನು ಮರೆ’ ಎಂದು ಆಮಿಷ ಒಡ್ಡುತ್ತಾರೆ. ಆದರೆ ಸರಮೆ ಅದಕ್ಕೆ ಕಿವಿಗೊಡದೆ ಅವರ ತಾವನ್ನು ಇಂದ್ರನಿಗೆ ತಿಳಿಸುತ್ತಾಳೆ. ಇಂದ್ರನು ಫಣಿಗಳನ್ನು ನಾಶಮಾಡಿ ಗೋವುಗಳನ್ನು ರಕ್ಷಿಸುತ್ತಾನೆ. ಹೀಗೆ ಸರಮೆ ವಿಶ್ವಾಸಪಾತ್ರ ಪತ್ತೇದಾರಳಾಗಿ ಪ್ರಸಿದ್ಧಳಾಗಿದ್ದಾಳೆ. ಇಂದಿಗೂ ಅವಳ ಸಂತಾನವಾದ ’ಸಾರಮೇಯ’ ಅಂದರೆ ನಾಯಿಗಳು ಯಜಮಾನನಿಗೆ ನಿಷ್ಠವಾಗಿರುತ್ತವೆ ಹಾಗೂ ಅಪರಾಧ ಪತ್ತೆ ಮಾಡುವಲ್ಲಿ ನಿಷ್ಣಾತವಾಗಿವೆ.
(ಮುಂದುವರಿಯುವುದು........)


ಮಹಾಬಲ ಭಟ್, ಗೋವಾ

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...