Saturday, March 25, 2017

ವೇದಕಾಲದ ಕೆಲವು ಋಷಿಕೆಯರು: (....ಮುಂದುವರಿದುದು)

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – 25

ವೇದಕಾಲದ ಕೆಲವು ಋಷಿಕೆಯರು: (....ಮುಂದುವರಿದುದು)

ಉರ್ವಶಿ: ಋಗ್ವೇದದಲ್ಲಿರುವ ಅನೇಕ ಸಂವಾದ ಸೂಕ್ತಗಳಲ್ಲಿ ಹತ್ತನೆಯ ಮಂಡಲದ ೯೫ ನೇ ಸೂಕ್ತವೂ ಒಂದು. ಇದರಲ್ಲಿ ಅಪ್ಸರೆ ಉರ್ವಶೀ ಹಾಗೂ ಚಂದ್ರವಂಶದ ರಾಜ ಪುರೂರವನ ಸಂವಾದವಿದೆ. ದೇವಲೋಕದ ಅಪ್ಸರೆಯಾದ ಉರ್ವಶಿ ಭೂಲೋಕಕ್ಕೆ ಬಂದಾಗ ಪುರೂರವ ಮೋಹಿತನಾಗಿ ಅವಳನ್ನು ವಿವಾಹವಾಗುತ್ತಾನೆ. ಮೂರು ಷರತ್ತುಗಳನ್ನು ವಿಧಿಸಿ ಉರ್ವಶಿ ಒಪ್ಪಿಕೊಳ್ಳುತ್ತಾಳೆ. ಅವಳ ಆಡುಗಳ ರಕ್ಷಣೆ, ಕೇವಲ ತುಪ್ಪದ ಸೇವನೆ ಮತ್ತು ಸಂಭೋಗ ಸಮಯದಲ್ಲದೆ ವಿವಸ್ತ್ರನಾಗಿ ಕಣ್ಣಿಗೆ ಬೀಳಬಾರದು ಎಂಬವೇ ಮೂರು ಷರತ್ತುಗಳು. ಅವರು ಸುಖ ದಾಂಪತ್ಯದಲ್ಲಿ ಯಯಾತಿಯೆಂಬ ಮಗನನ್ನು ಪಡೆಯುತ್ತಾರೆ. ಉರ್ವಶಿಯಿಲ್ಲದೆ ಕೊರಗುತ್ತಿದ್ದ ದೇವತೆಗಳು ಒಂದು ರಾತ್ರಿ ಅವಳ ಆಡುಗಳನ್ನು ಅಪಹರಿಸುತ್ತಾರೆ. ಅವರ ಕೂಗಿಗೆ ಎದ್ದ ಇಬ್ಬರೂ ವಿವಸ್ತ್ರವಾಗಿರುವಾಗ ಪರಸ್ಪರ ನೋಡುತ್ತಾರೆ. ನಿಯಮಭಂಗವಾದ ಕಾರಣ ಉರ್ವಶಿ ಸ್ವರ್ಗಕ್ಕೆ ನಡೆಯುತ್ತಾಳೆ.

ವಸುಕ್ರಪತ್ನಿ: ಇಂದ್ರನ ಮಗನಾದ ವಸುಕ್ರ ಎನ್ನುವವನ ಮಗಳು ಇವಳು. ಹತ್ತನೆಯ ಮಂಡಲದ ಇಪ್ಪತ್ತೆಂಟನೆಯ ಸೂಕ್ತದ ಋಷಿಕೆ. ಹನ್ನೆರಡು ಮಂತ್ರಗಳನ್ನು ಹೊಂದಿರುವ ಈ ಸೂಕ್ತದಲ್ಲಿ ಇಂದ್ರನ ಹಾಗೂ ವಸುಕ್ರನ ಸ್ತುತಿಯಿದೆ.

ಇಂದ್ರಾಣಿ: ಹತ್ತನೆಯ ಮಂಡಲದ ೮೬ ನೇ ಸೂಕ್ತದ ಋಷಿಕೆ. ಇಂದ್ರಪರಕವಾದ ಈ ಸೂಕ್ತದಲ್ಲಿ ಹತ್ತು ಮಂತ್ರಗಳು ಇಂದ್ರಾಣಿಯವು.
(ಮುಂದುವರಿಯುವುದು......)

ಮಹಾಬಲ ಭಟ್, ಗೋವಾ

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...