Thursday, March 9, 2017

ಅಪಾಲಾ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
ಸನಾತನ ಭಾರತದ ಸ್ತ್ರೀರತ್ನಗಳು
ಭಾಗ – 9

ಅಪಾಲಾ


ವೇದದೃಷ್ಟಾರ ಋಷಿಕೆಗಳಲ್ಲಿ ಅಗ್ರಗಣ್ಯಳು ಅಪಾಲಾ. ಇವಳು ಕೂಡ ಅತ್ರಿ ವಂಶದವಳೇ. ಅತ್ಯಂತ ಕಷ್ಟಮಯ ಜೀವನ ಇವಳದಾಗಿತ್ತು. ಪೂರ್ವಸಂಚಿತಕರ್ಮದ ಫಲವೋ ಎಂಬಂತೆ ವಿವಾಹಾನಂತರ ಚರ್ಮವ್ಯಾಧಿಗೆ ಗುರಿಯಾದಳು. ಕೈಹಿಡಿದ ಪತಿ ಸಂಸಾರಸಾಗರದಲ್ಲಿ ಅರ್ಧದಲ್ಲೇ ಕೈಬಿಟ್ಟಾಗ ತವರುಮನೆಯನ್ನೇ ಆಶ್ರಯಿಸಬೇಕಾಯಿತು. ತಂದೆ ತುಂಬ ವಾತ್ಸಲ್ಯದಿಂದ ಸಲಹಿದರು. ಅವರ ಪ್ರೇರಣೆಯಿಂದ ಆತ್ಮಸ್ಥೈರ್ಯವನ್ನು ತಂದುಕೊಂಡು ಧೈರ್ಯವಾಗಿ ಜೀವನವನ್ನು ಎದುರಿಸಿದಳು. ತನ್ನ ಪ್ರೀತಿಯ ತಂದೆಯ ತಲೆ ಕೂದಲುಗಳನ್ನು ಕಳೆದುಕೊಂಡು ಬೋಳಾಗುವುದನ್ನು ನೋಡಿ ಬೇಸರಗೊಂಡು ವೇದಮಂತ್ರದ ಮೂಲಕ ಇಂದ್ರನನ್ನು ಸ್ತುತಿಸಿದಳು (ಋಗ್ವೇದ ೮ ನೇ ಮಂಡಲ ೯೧ನೇ ಸೂಕ್ತ). ಈ ಸೂಕ್ತದಲ್ಲಿ ಏಳು ಮಂತ್ರಗಳಿವೆ. ಇಂದ್ರನ ಅವಳ ಬೇಡಿಕೆಯನ್ನು ಈಡೇರಿಸಿದ್ದಲ್ಲದೆ, ಅವಳಿಗೆ ಆರೋಗ್ಯವನ್ನೂ ಕರುಣಿಸಿದ.

No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...