Thursday, March 23, 2017

ವೇದಕಾಲದ ಕೆಲವು ಋಷಿಕೆಯರು: (ಮುಂದುವರಿದುದು)

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – 23

ವೇದಕಾಲದ ಕೆಲವು ಋಷಿಕೆಯರು: (ಮುಂದುವರಿದುದು)

ವಾಗಾಂಭ್ರಣೀ: ಅಂಭ್ರಣ ಋಷಿಯ ಕುವರಿ ವಾಕ್ ಹತ್ತನೆಯ ಮಂಡಲದ ೧೨೫ ನೇ ಸೂಕ್ತದ ಋಷಿಕೆ. ಅತ್ಯುನ್ನತ ಅದ್ವೈತತತ್ತ್ವವನ್ನು ಸಾಧಿಸಿದ್ದ ಈ ಬ್ರಹ್ಮವಾದಿನಿ ಸಚ್ಚಿತ್ಸುಖಾತ್ಮಕವಾದ ಪರಮಾತ್ಮನೊಂದಿಗೆ ತಾದಾತ್ಮ್ಯವನ್ನನುಭವಿಸುತ್ತ ತನ್ನನ್ನೇ ತಾನು ಸ್ತುತಿಸಿಕೊಳ್ಳುತ್ತಾಳೆ. ತಾನೇ ಮರುತ್, ಮಿತ್ರ, ರುದ್ರ ಎಂದೆಲ್ಲ ವರ್ಣಿಸುತ್ತ ಆತ್ಮ ಸರ್ವವನ್ನೂ ವ್ಯಾಪಿಸಿದೆ ಎಂಬ ಅದ್ವೈತ ತತ್ತ್ವವನ್ನು ಸಾರುತ್ತಾಳೆ.

ಶ್ರದ್ಧಾ ಕಾಮಾಯನೀ: ಋಗ್ವೇದದ ಹತ್ತನೆಯ ಮಂಡಲದ ೧೫೧ ನೇ ಸೂಕ್ತದ ದೇವತೆ ಶ್ರದ್ಧಾ. ಐದು ಮಂತ್ರಗಳ ಈ ಸೂಕ್ತದ ಋಷಿಕೆ ಶ್ರದ್ಧಾ ಕಾಮಾಯನೀ. ಜ್ಞಾನ ಸಂಪಾದನೆಯಲ್ಲಿ, ದಾನದಲ್ಲಿ, ಕೆಲಸದಲ್ಲಿ ಹೀಗೆ ಜೀವನದ ಪ್ರತಿಯೊಂದು ಕ್ಷಣದಲ್ಲೂ ಶ್ರದ್ಧೆ ಬೇಕು ಎಂಬುದನ್ನು ಭಗವದ್ಗೀತಾದಿಯಾಗಿ ಅನೇಕ ಗ್ರಂಥಗಳು ಹೇಳಿವೆ. ಈ ಸೂಕ್ತದಲ್ಲಿ ಋಷಿಕೆಯು ಅದನ್ನೇ ಹೇಳುತ್ತಾಳೆ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹೀಗೆ ಎಲ್ಲ ಕಾಲದಲ್ಲಿಯೂ ಶ್ರದ್ಧಾದೇವಿಯ ಅನುಗ್ರಹವಾಗಲಿ ಎಂದು ಬೇಡಿಕೊಳ್ಳುತ್ತಾಳೆ.


ಸರ್ಪರಾಜ್ಞೀ: ಋಗ್ವೇದದ ಹತ್ತನೆಯ ಮಂಡಲದ ೧೮೯ ನೇ ಸೂಕ್ತದ ಋಷಿಕೆ ಸರ್ಪರಾಜ್ಞೀ. ಸೂರ್ಯದೇವತಾಪರಕವಾದ ಇ ಸೂಕ್ತದಲ್ಲಿ ಗಾಯತ್ರಿ ಛಂದಸ್ಸಿನ ಮೂರು ಋಕ್ಕುಗಳು ಮಾತ್ರ ಇವೆ. ಈ ಸೂಕ್ತ ಇತರ ವೇದಗಳಲ್ಲಿಯೂ ಕಾಣಸಿಗುತ್ತದೆ.

ಮಹಾಬಲ ಭಟ್, ಗೋವಾ

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...