Friday, March 24, 2017

ವೇದಕಾಲದ ಕೆಲವು ಋಷಿಕೆಯರು: (....ಮುಂದುವರಿದುದು)

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – ೨೪

ವೇದಕಾಲದ ಕೆಲವು ಋಷಿಕೆಯರು: (....ಮುಂದುವರಿದುದು)

ಸುದಿತಿ: ಎಂಟನೆಯ ಮಂಡಲದ ೭೧ನೆಯ ಸೂಕ್ತ. ಆಂಗಿರಸ, ಪುರುಮೀಳ ಋಷಿಗಳೊಂದಿಗೆ ಸುದಿತಿಯು ಕೂಡ ಈ ಸೂಕ್ತದ ಋಷಿಪಟ್ಟವನ್ನಲಂಕರಿಸಿದ್ದಾಳೆ. ೧೫ ಮಂತ್ರಗಳ ಈ ಸೂಕ್ತ ಅಗ್ನಿಪರಕವಾಗಿದೆ.

ಜರಿತಾ: ಹತ್ತನೆಯ ಮಂಡಲದ ೧೪೨ ನೆಯ ಅಗ್ನಿಪರಕವಾದ ಸೂಕ್ತದ ದ್ರಷ್ಟಾರೆ ಜರಿತಾ. ಮಹಾಭಾರತದ ಆದಿಪರ್ವದ ೨೩೦ನೇ ಅಧ್ಯಾಯದಲ್ಲಿರುವ ಕಥೆಯ ಪ್ರಕಾರ ಜರಿತಾ ಖಾಂಡವ ವನದಲ್ಲಿರುವ ಒಬ್ಬಳು ಪಕ್ಷಿಣಿ. ಮಂದಪಾಲನೆಂಬ ಮುನಿಯಿಂದ ಅವಳಿಗೆ ನಾಲ್ಕು ಬ್ರಹ್ಮಜ್ಞಾನಿ ಮಕ್ಕಳು ಹುಟ್ಟಿದರು. ಅಗ್ನಿಯು ಖಾಂಡವವನವನ್ನು ಸುಡಲು ಬಂದಾಗ ತನ್ನ ಮಕ್ಕಳ ರಕ್ಷಣೆಗಾಗಿ ಅಗ್ನಿಯನ್ನು ಸ್ತುತಿಸುತ್ತಾಳೆ. ಈ ಸೂಕ್ತದ ಮೊದಲ ಎರಡು ಮಂತ್ರಗಳು ಮಾತ್ರ ಇವಳ ಹೆಸರಿನಲ್ಲಿವೆ.

ಸಿಕತಾ ನಿವಾವರಿ: ಒಂಭತ್ತನೆಯ ಮಂಡಲದ ೮೬ನೇ ಸೂಕ್ತದ ೧೧ ರಿಂದ ೨೦ನೆಯ ಮಂತ್ರಗಳ ಋಷಿಕೆ ಇವಳು. ಪವಮಾನ ಸೋಮ ಈ ಸೂಕ್ತದ ದೇವತೆ.

ರೋಮಶಾ: ಬೃಹಸ್ಪತಿಯ ಮಗಳು ಹಾಗೂ ಭಾವಭವ್ಯನ ಪತ್ನಿ. ವಿದುಷಿಯಾಗಿದ್ದಳು. ಇವಳ ಮೈಯೆಲ್ಲ ರೋಮದಿಂದ ಕೂಡಿದ್ದರಿಂದ ಪತಿಗೆ ಇವಳು ಇಷ್ಟವಾಗುತ್ತಿರಲಿಲ್ಲ. ಇವಳು ಮಹಿಳೆಯರ ವಿದ್ಯಾಭ್ಯಾಸದ ಬಗ್ಗೆ, ಸ್ವಾಭಿಮಾನದಿಂದ ಕೂಡಿದ ಜೀವದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಿದಳು. ಋಗ್ವೇದದ ಪ್ರಥಮಮಂಡಲದ ೧೨೬ ನೇ ಸೂಕ್ತದ ಕೊನೆಯ ಮಂತ್ರದ ಋಷಿಕೆ ಇವಳು. ಸಾಮವೇದದ ಅನೇಕ ಸೂಕ್ತಗಳು ಇವಳ ಹೆಸರಿನಲ್ಲಿವೆ. (ಮುಂದುವರಿಯುವುದು...)


ಮಹಾಬಲ ಭಟ್, ಗೋವಾ

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...