Wednesday, March 22, 2017

ವೇದಕಾಲದ ಕೆಲವು ಋಷಿಕೆಯರು:

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – ೨೨

ವೇದಕಾಲದ ಕೆಲವು ಋಷಿಕೆಯರು:

ವೇದದೃಷ್ಟಾರರಾದ ಕೆಲವು ಋಷಿಕೆಯರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಲಭ್ಯವಿರುವ ಮಾಹಿತಿಯನ್ನು ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ.
ಶಾಶ್ವತಿ ಆಂಗೀರಸಿ: ಆಂಗೀರಸ ಗೋತ್ರದ ಋಷಿಕೆ ಇವಳು. ೮ನೆಯ ಮಂಡಲದ ೧ನೆಯ ಸೂಕ್ತದ ಕೊನೆಯ ಋಕ್ಕಿನ ಋಷಿಕೆ. ಇವಳ ಗಂಡನ ಪುರುಷತ್ವ ಯಾವುದೋ ಕಾರಣದಿಂದ ನಾಶವಾಗಿತ್ತು. ಇಂದ್ರನ ಪ್ರಾರ್ಥನೆಯಿಂದ ಅವನು ಅದನ್ನು ಮರಳಿ ಪಡೆದಾಗ ಶಾಶ್ವತಿ ಆನಂದ ಹೊಂದಿದಳು ಎಂಬ ವಿಚಾರ ಈ ಋಕ್ಕಿನಲ್ಲಿದೆ.
ಅದಿತಿ: ನಾಲ್ಕನೆಯ ಮಂಡಲದ ೧೮ ನೇ ಸೂಕ್ತದ ೭ನೇ ಋಕ್ಕಿನ ದೃಷ್ಟಾರಳು. ಇಲ್ಲಿ ’ನನ್ನ ಮಗನಾದ ಇಂದ್ರನು ವಜ್ರಾಯುಧದಿಂದ ವೃತ್ರಾಸುರನನ್ನು ಕೊಂದು ನದಿಗಳು ಸ್ವತಂತ್ರವಾಗಿ ಹರಿಯುವಂತೆ ಮಾಡಿದನು’ ಎಂದು ಹೇಳಿದ್ದಾಳೆ. ಪ್ರಾಯ: ಕಶ್ಯಪ ಋಷಿಯ ಹೆಂಡತಿ ಹಾಗೂ ದೇವತೆಗಳ ಅಥವಾ ಆದಿತ್ಯರ ತಾಯಿಯಾದ ಅದಿತಿಯೇ ಇವರಿಳಬೇಕು.
ಅದಿತಿ ದಾಕ್ಷಾಯಣಿ: ಹತ್ತನೆಯ ಮಂಡಲದ ೭೨ ನೆಯ ಸೂಕ್ತದ ಋಷಿಕೆ. ಈ ಸೂಕ್ತ ಸೃಷ್ಟಿಯ ಕ್ರಮವನ್ನು ವರ್ಣಿಸುತ್ತದೆ. ದಕ್ಷ ಪ್ರಜಾಪತಿಯಿಂದ ಅದಿತಿ ಹುಟ್ಟಿದಳೆಂದೂ ಅವಳಿಂದ ದೇವತೆಗಳೆಲ್ಲ ಹುಟ್ಟಿದರು ಎಂದು ವರ್ಣಿಸಲಾಗಿದೆ.
ಗೋಧಾ: ಹತ್ತನೆಯ ಮಂಡಲದ ೧೩೪ನೇ ಸೂಕ್ತದ ೬ ಮತ್ತು ೭ನೆಯ ಋಕ್ಕುಗಳು ಇವಳ ಹೆಸರಿನಲ್ಲಿದೆ. ಇದು ಇಂದ್ರನನ್ನು ಹೊಗಳುವ ಹಾಗೂ ಪ್ರಾರ್ಥಿಸುವ ಸೂಕ್ತ.
ಪ್ರಾಜಾಪತ್ಯಾ ದಕ್ಷಿಣಾ: ಹತ್ತನೆಯ ಮಂಡಲದ ೧೦೭ ನೇ ಸೂಕ್ತದ ಋಷಿಕೆ. ದಕ್ಷಿಣೆಯ ಮಹತ್ತ್ವವನ್ನು ವರ್ಣಿಸಿದ್ದಾಳೆ.
                                                                             ..... ಮುಂದುವರಿಯುವುದು

ಮಹಾಬಲ ಭಟ್, ಗೋವಾ

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...