ಮಹಿಳಾ
ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
“ಸನಾತನ ಭಾರತದ
ಸ್ತ್ರೀರತ್ನಗಳು”
ಭಾಗ – ೨೨
ವೇದಕಾಲದ ಕೆಲವು
ಋಷಿಕೆಯರು:
ವೇದದೃಷ್ಟಾರರಾದ
ಕೆಲವು ಋಷಿಕೆಯರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಲಭ್ಯವಿರುವ ಮಾಹಿತಿಯನ್ನು ಇಲ್ಲಿ
ಸಂಗ್ರಹಿಸಿ ಕೊಡಲಾಗಿದೆ.
ಶಾಶ್ವತಿ ಆಂಗೀರಸಿ: ಆಂಗೀರಸ ಗೋತ್ರದ ಋಷಿಕೆ ಇವಳು. ೮ನೆಯ ಮಂಡಲದ ೧ನೆಯ ಸೂಕ್ತದ ಕೊನೆಯ
ಋಕ್ಕಿನ ಋಷಿಕೆ. ಇವಳ ಗಂಡನ ಪುರುಷತ್ವ ಯಾವುದೋ ಕಾರಣದಿಂದ ನಾಶವಾಗಿತ್ತು. ಇಂದ್ರನ
ಪ್ರಾರ್ಥನೆಯಿಂದ ಅವನು ಅದನ್ನು ಮರಳಿ ಪಡೆದಾಗ ಶಾಶ್ವತಿ ಆನಂದ ಹೊಂದಿದಳು ಎಂಬ ವಿಚಾರ ಈ
ಋಕ್ಕಿನಲ್ಲಿದೆ.
ಅದಿತಿ: ನಾಲ್ಕನೆಯ ಮಂಡಲದ ೧೮ ನೇ ಸೂಕ್ತದ ೭ನೇ ಋಕ್ಕಿನ ದೃಷ್ಟಾರಳು. ಇಲ್ಲಿ
’ನನ್ನ ಮಗನಾದ ಇಂದ್ರನು ವಜ್ರಾಯುಧದಿಂದ ವೃತ್ರಾಸುರನನ್ನು ಕೊಂದು ನದಿಗಳು ಸ್ವತಂತ್ರವಾಗಿ
ಹರಿಯುವಂತೆ ಮಾಡಿದನು’ ಎಂದು ಹೇಳಿದ್ದಾಳೆ. ಪ್ರಾಯ: ಕಶ್ಯಪ ಋಷಿಯ ಹೆಂಡತಿ ಹಾಗೂ ದೇವತೆಗಳ ಅಥವಾ
ಆದಿತ್ಯರ ತಾಯಿಯಾದ ಅದಿತಿಯೇ ಇವರಿಳಬೇಕು.
ಅದಿತಿ ದಾಕ್ಷಾಯಣಿ: ಹತ್ತನೆಯ ಮಂಡಲದ ೭೨ ನೆಯ ಸೂಕ್ತದ ಋಷಿಕೆ. ಈ ಸೂಕ್ತ ಸೃಷ್ಟಿಯ
ಕ್ರಮವನ್ನು ವರ್ಣಿಸುತ್ತದೆ. ದಕ್ಷ ಪ್ರಜಾಪತಿಯಿಂದ ಅದಿತಿ ಹುಟ್ಟಿದಳೆಂದೂ ಅವಳಿಂದ ದೇವತೆಗಳೆಲ್ಲ
ಹುಟ್ಟಿದರು ಎಂದು ವರ್ಣಿಸಲಾಗಿದೆ.
ಗೋಧಾ: ಹತ್ತನೆಯ ಮಂಡಲದ ೧೩೪ನೇ ಸೂಕ್ತದ ೬ ಮತ್ತು ೭ನೆಯ ಋಕ್ಕುಗಳು ಇವಳ
ಹೆಸರಿನಲ್ಲಿದೆ. ಇದು ಇಂದ್ರನನ್ನು ಹೊಗಳುವ ಹಾಗೂ ಪ್ರಾರ್ಥಿಸುವ ಸೂಕ್ತ.
ಪ್ರಾಜಾಪತ್ಯಾ
ದಕ್ಷಿಣಾ: ಹತ್ತನೆಯ ಮಂಡಲದ
೧೦೭ ನೇ ಸೂಕ್ತದ ಋಷಿಕೆ. ದಕ್ಷಿಣೆಯ ಮಹತ್ತ್ವವನ್ನು ವರ್ಣಿಸಿದ್ದಾಳೆ.
.....
ಮುಂದುವರಿಯುವುದು
ಮಹಾಬಲ
ಭಟ್, ಗೋವಾ
No comments:
Post a Comment