*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*
ಪ್ರಸಂಗ – ೨೩
*ಸಂಚಿತಾರ್ಥಂ ವಿನಶ್ಯತಿ*
ಭೋಜರಾಜನ ಕವಿಜನಪ್ರೀತಿ ಹಾಗೂ ಉದಾರತೆ ಮಂತ್ರಿಯಾದ ಬುದ್ಧಿಸಾಗರನ ನಿದ್ದೆ ಕೆಡಿಸಿತ್ತು. ಹಣದ ಅಪವ್ಯಯವಾಗುತ್ತಿರುವುದನ್ನು ಹೇಗಾದರೂ ಮಾಡಿ ಅವನಿಗೆ ಮನವರಿಕೆ ಮಾಡಿ ಕೊಡಬೇಕೆಂದು ಪ್ರಯತ್ನಿಸುತ್ತಿದ್ದ. ಒಂದಿನ ರಾಜ ಸ್ನಾನಕ್ಕೆ ಹೋಗುವ ಹಾದಿಯಲ್ಲಿ ಒಂದು ಸಾಲನ್ನು ಬರೆದಿಟ್ಟ. ’ಆಪದರ್ಥಂ ಧನಂ ರಕ್ಷೇತ್’ (ಆಪತ್ಕಾಲಕ್ಕಾಗಿ ಹಣವನ್ನು ಉಳಿಸಬೇಕು). ರಾಜ ಅದನ್ನು ಓದಿದ. ಅದರ ಕೆಳಗೆ ತನ್ನ ಪ್ರತಿಕ್ರಿಯೆಯನ್ನು ಬರೆದ. ’ಶ್ರೀಮತಾಮಾಪದ: ಕುತ:?’ (ಶ್ರೀಮಂತರಿಗೆ ಆಪತ್ತೆಲ್ಲಿ?). ಅದನ್ನು ಓದಿದ ಮಂತ್ರಿಗೆ ಕಸಿವಿಸಿಯಾಯಿತು. ಆದರೂ ಪ್ರಯತ್ನ ಬಿಡಲಿಲ್ಲ. ತನ್ನ ಉತ್ತರವನ್ನು ಸೇರಿಸಿದ. ’ಸಾ ಚೇದಪಗತಾ ಲಕ್ಷ್ಮೀಃ’ (ಆ ಲಕ್ಷ್ಮಿ ಹೊರಟು ಹೋದರೆ?) ಮರುದಿನ ಅದಕ್ಕೂ ರಾಜನ ಉತ್ತರ ಸಿದ್ಧವಿತ್ತು. ’ಸಂಚಿತಾರ್ಥಂ ವಿನಶ್ಯತಿ’ (ಕೂಡಿಟ್ಟ ಹಣ ನಾಶವನ್ನು ಹೊಂದುತ್ತದೆ). ರಾಜ-ಮಂತ್ರಿಯರ ಸಂಭಾಷಣೆಯೇ ಒಂದು ಶ್ಲೋಕವಾಯಿತು.
ಆಪದರ್ಥಂ ಧನಂ ರಕ್ಷೇತ್
ಶ್ರೀಮತಾಮಾಪದಃ ಕುತಃ |
ಸಾ ಚೇದಪಗತಾ ಲಕ್ಷ್ಮೀ:
ಸಂಚಿತಾರ್ಥಂ ವಿನಶ್ಯತಿ ||
📝 *ಮಹಾಬಲ ಭಟ್, ಗೋವಾ*
# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.
ಪ್ರಸಂಗ – ೨೩
*ಸಂಚಿತಾರ್ಥಂ ವಿನಶ್ಯತಿ*
ಭೋಜರಾಜನ ಕವಿಜನಪ್ರೀತಿ ಹಾಗೂ ಉದಾರತೆ ಮಂತ್ರಿಯಾದ ಬುದ್ಧಿಸಾಗರನ ನಿದ್ದೆ ಕೆಡಿಸಿತ್ತು. ಹಣದ ಅಪವ್ಯಯವಾಗುತ್ತಿರುವುದನ್ನು ಹೇಗಾದರೂ ಮಾಡಿ ಅವನಿಗೆ ಮನವರಿಕೆ ಮಾಡಿ ಕೊಡಬೇಕೆಂದು ಪ್ರಯತ್ನಿಸುತ್ತಿದ್ದ. ಒಂದಿನ ರಾಜ ಸ್ನಾನಕ್ಕೆ ಹೋಗುವ ಹಾದಿಯಲ್ಲಿ ಒಂದು ಸಾಲನ್ನು ಬರೆದಿಟ್ಟ. ’ಆಪದರ್ಥಂ ಧನಂ ರಕ್ಷೇತ್’ (ಆಪತ್ಕಾಲಕ್ಕಾಗಿ ಹಣವನ್ನು ಉಳಿಸಬೇಕು). ರಾಜ ಅದನ್ನು ಓದಿದ. ಅದರ ಕೆಳಗೆ ತನ್ನ ಪ್ರತಿಕ್ರಿಯೆಯನ್ನು ಬರೆದ. ’ಶ್ರೀಮತಾಮಾಪದ: ಕುತ:?’ (ಶ್ರೀಮಂತರಿಗೆ ಆಪತ್ತೆಲ್ಲಿ?). ಅದನ್ನು ಓದಿದ ಮಂತ್ರಿಗೆ ಕಸಿವಿಸಿಯಾಯಿತು. ಆದರೂ ಪ್ರಯತ್ನ ಬಿಡಲಿಲ್ಲ. ತನ್ನ ಉತ್ತರವನ್ನು ಸೇರಿಸಿದ. ’ಸಾ ಚೇದಪಗತಾ ಲಕ್ಷ್ಮೀಃ’ (ಆ ಲಕ್ಷ್ಮಿ ಹೊರಟು ಹೋದರೆ?) ಮರುದಿನ ಅದಕ್ಕೂ ರಾಜನ ಉತ್ತರ ಸಿದ್ಧವಿತ್ತು. ’ಸಂಚಿತಾರ್ಥಂ ವಿನಶ್ಯತಿ’ (ಕೂಡಿಟ್ಟ ಹಣ ನಾಶವನ್ನು ಹೊಂದುತ್ತದೆ). ರಾಜ-ಮಂತ್ರಿಯರ ಸಂಭಾಷಣೆಯೇ ಒಂದು ಶ್ಲೋಕವಾಯಿತು.
ಆಪದರ್ಥಂ ಧನಂ ರಕ್ಷೇತ್
ಶ್ರೀಮತಾಮಾಪದಃ ಕುತಃ |
ಸಾ ಚೇದಪಗತಾ ಲಕ್ಷ್ಮೀ:
ಸಂಚಿತಾರ್ಥಂ ವಿನಶ್ಯತಿ ||
📝 *ಮಹಾಬಲ ಭಟ್, ಗೋವಾ*
# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.
No comments:
Post a Comment