*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*
ಪ್ರಸಂಗ – ೩೦
*ವಿಕಟನಿತಂಬೆ*
ಕಾಶ್ಮೀರದ ಪಂಡಿತಪರಂಪರೆಯಲ್ಲಿ ವಿಕಟನಿತಂಬಾ ಎಂಬ ಕವಯಿತ್ರಿಯೊಬ್ಬಳು ಆಗಿಹೋದಳು. ತರ್ಕ-ವ್ಯಾಕರಣ-ಸಾಹಿತ್ಯಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ಅವಳಿಗೆ ಗಂಡನಾಗಿ ಸಿಕ್ಕವ ಮಾತ್ರ ನಿರಕ್ಷರಕುಕ್ಷಿಯಾಗಿದ್ದ. ಅವಳ ಪರಿಸ್ಥಿತಿಯನ್ನು ನೋಡಿ ಅವಳ ಸಖಿಯೊಬ್ಬಳು ವರ್ಣಿಸಿದ ಕ್ರೂರ ವಿಡಂಬನೆ ಹೀಗಿದೆ:
ಕಾಲೇ ಮಾಷಂ ಸಸ್ಯೇ ಮಾಸಂ
ವದತಿ ಸಕಾಶಂ ಯಶ್ಚ ಶಕಾಸಂ |
ಉಷ್ಟ್ರೇ ಲುಂಪತಿ ಶಂ ವಾ ರಂ ವಾ
ತಸ್ಮೈ ದತ್ತಾ ವಿಕಟನಿತಂಬಾ ||
ಕಾಲಕ್ಕೆ ಸಂಬಂಧಿಸಿದ ಪದವನ್ನು ಹೇಳುವಾಗ ಮಾಷ ಎನ್ನುವುದು (ಮಾಸ ಎಂದು ಹೇಳಲು), ಸಸ್ಯಕ್ಕೆ ಸಂಬಂಧಪಟ್ಟಾಗ ಮಾಸ ಎನ್ನುವುದು (ಮಾಷ=ಉದ್ದು ಎನ್ನಬೇಕಿತ್ತು), ಸಕಾಶ(ಸಮೀಪ) ಎನ್ನಲು ಶಕಾಸ ಎನ್ನುವುದು, ಉಷ್ಟ್ರ ಎಂದು ಹೇಳುವಾಗ ಒಂದೋ ಉಟ್ರ ಎನ್ನುವುದು ಇಲ್ಲವೇ ಉಷ್ಟ ಎಂದು ಹೇಳುವುದು ಇಂತಹ ಪುರುಷನಿಗೆ ವಿಕಟನಿತಂಬೆಯನ್ನು ಕೊಟ್ಟರು.
ಹಿಂದೆ ಹೆಣ್ಮಕ್ಕಳು ಶಿಕ್ಷಣದಲ್ಲಿ ಹಿಂದುಳಿದಿದ್ದರು ಎಂದು ಹೇಳಿದವರಾರು?
*ಮಹಾಬಲ ಭಟ್, ಗೋವಾ*
# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ
ಪ್ರಸಂಗ – ೩೦
*ವಿಕಟನಿತಂಬೆ*
ಕಾಶ್ಮೀರದ ಪಂಡಿತಪರಂಪರೆಯಲ್ಲಿ ವಿಕಟನಿತಂಬಾ ಎಂಬ ಕವಯಿತ್ರಿಯೊಬ್ಬಳು ಆಗಿಹೋದಳು. ತರ್ಕ-ವ್ಯಾಕರಣ-ಸಾಹಿತ್ಯಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ಅವಳಿಗೆ ಗಂಡನಾಗಿ ಸಿಕ್ಕವ ಮಾತ್ರ ನಿರಕ್ಷರಕುಕ್ಷಿಯಾಗಿದ್ದ. ಅವಳ ಪರಿಸ್ಥಿತಿಯನ್ನು ನೋಡಿ ಅವಳ ಸಖಿಯೊಬ್ಬಳು ವರ್ಣಿಸಿದ ಕ್ರೂರ ವಿಡಂಬನೆ ಹೀಗಿದೆ:
ಕಾಲೇ ಮಾಷಂ ಸಸ್ಯೇ ಮಾಸಂ
ವದತಿ ಸಕಾಶಂ ಯಶ್ಚ ಶಕಾಸಂ |
ಉಷ್ಟ್ರೇ ಲುಂಪತಿ ಶಂ ವಾ ರಂ ವಾ
ತಸ್ಮೈ ದತ್ತಾ ವಿಕಟನಿತಂಬಾ ||
ಕಾಲಕ್ಕೆ ಸಂಬಂಧಿಸಿದ ಪದವನ್ನು ಹೇಳುವಾಗ ಮಾಷ ಎನ್ನುವುದು (ಮಾಸ ಎಂದು ಹೇಳಲು), ಸಸ್ಯಕ್ಕೆ ಸಂಬಂಧಪಟ್ಟಾಗ ಮಾಸ ಎನ್ನುವುದು (ಮಾಷ=ಉದ್ದು ಎನ್ನಬೇಕಿತ್ತು), ಸಕಾಶ(ಸಮೀಪ) ಎನ್ನಲು ಶಕಾಸ ಎನ್ನುವುದು, ಉಷ್ಟ್ರ ಎಂದು ಹೇಳುವಾಗ ಒಂದೋ ಉಟ್ರ ಎನ್ನುವುದು ಇಲ್ಲವೇ ಉಷ್ಟ ಎಂದು ಹೇಳುವುದು ಇಂತಹ ಪುರುಷನಿಗೆ ವಿಕಟನಿತಂಬೆಯನ್ನು ಕೊಟ್ಟರು.
ಹಿಂದೆ ಹೆಣ್ಮಕ್ಕಳು ಶಿಕ್ಷಣದಲ್ಲಿ ಹಿಂದುಳಿದಿದ್ದರು ಎಂದು ಹೇಳಿದವರಾರು?
*ಮಹಾಬಲ ಭಟ್, ಗೋವಾ*
# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ
No comments:
Post a Comment